ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಸಿಕ ಸಭೆ,- ಅಗಲಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರಿಗೆ ಶೃದ್ಧಾಂಜಲಿ
ಕೋಡಿಂಬಾಡಿ: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಸಿಕ ಸಭೆಯು ದಿನಾಂಕ 27/12/24ರಂದು ಸಂಘದ ಕಛೇರಿಯಲ್ಲಿ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆಯವರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಅಗಲಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರೀಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇತ್ತೀಚೆಗೆ ಮರಣ ಹೊಂದಿದ ಸಂಘದ ಹಿರಿಯ ಸದಸ್ಯರಾದ ಲಿಂಗಪ್ಪ ಗೌಡ ಪಿಲಿಗುಂಡ ರವರ ಮನೆಯವರೀಗೆ ಒಕ್ಕೂಟದಿಂದ ನೀಡುವ ಪರಿಹಾರ ಧನವನ್ನು ಪತ್ನಿ ಮೋಹಿನಿ ಯವರಿಗೆ ಹಸ್ತಾಂತರಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೇಶವ ಗೌಡ ಬರೆಮೇಲು,ನಿರ್ದೇಶಕರುಗಳಾದ ರತ್ನವರ್ಮ ಆಳ್ವ ಮಿತ್ತಳಿಕೆ ,ಎಲ್ಯಣ್ಣ ಗೌಡ ಮೇಲಿನಹಿತ್ಲು, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು,ಬಾಬು ಆಚಾರ್ಯ ಕೊಂಬಕೋಡಿ ,ಅಶೊಕ ಗೌಡ ಮೇಲಿನಹಿತ್ಲು,ರೇಣುಕಾ ಎಂ ರೈ ಮಠಂತಬೆಟ್ಟು,ಲೀಲಾವತಿ ಪರಬಪಾಲು ಉಪಸ್ಥಿತರಿದ್ದರು, ಸಂಘದ ಕಾರ್ಯದರ್ಶಿ ರಮೇಶ್ ಕೆ ಸ್ವಾಗತಿಸಿ ವಂದಿಸಿದರು, ಸಿಬ್ಬಂದಿ ನಾರಾಯಣ ಪೂಜಾರಿ ಮತ್ತು ಕವಿತಾ ಸಹಕರಿಸಿದರು