ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ, ಸಹಕಾರಿ ರತ್ನ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮ ಶತಾಬ್ಧಿ ಸಂಭ್ರಮ-೨೦೨೬ ‘ಕ್ಯಾಂಪ್ಕೋ ಬ್ರಹ್ಮ ಶತನಮನಗಳು’ ಕಾರ್ಯಕ್ರಮವು ಕೆಮ್ಮಿoಜೆ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಕ್ಯಾಂಪ್ಕೋ ಸಂಸ್ಥೆಯು ವಾರಣಾಶಿ ಸುಬ್ರಾಯ ಭಟ್ ಅವರ ಮಗು. ಯಾರಿಗೂ ಬೇಡವಾದ ಅಡಿಕೆ ಬೆಳೆಗಾರರಿಗಾಗಿ ಹುಟ್ಟು ಹಾಕಿದ ಕ್ಯಾಂಪ್ಕೋ ಇಂದು ದೈತ್ಯ ಸಂಸ್ಥೆಯಾಗಿ ಬೆಳೆದು ದೇಶದ ಅತ್ಯುತ್ಕೃಷ್ಠ ಸಂಸ್ಥೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಅವರು ಕ್ಯಾಂಪ್ಕೋದಲ್ಲಿ ತಪಸ್ಸಿನಂತೆ ಸೇವೆ ಗೈದಿರುವ ಫಲವಾಗಿ ಇಂದು ಕೊಟ್ಯಾಂತರ ಅಡಿಕೆ ಬೆಳೆಗಾರರ ಬಾಳಿಗೆ ಬೆಳಕಾದವರು. ಕನಿಷ್ಠ ಮೂರು ಸಾವಿರ ಮಂದಿಗೆ ಉದ್ಯೋಗ ನೀಡಿದ ಅನ್ನದಾತರು. ಇಂತಹ ಯುಗ ಪುರುಷನ ಜೀವನ ಸಾಧನೆ ಯುವ ಸಮಾಜಕ್ಕೆ ದಾರಿ ದೀಪವಾಗುವ ನಿಟ್ಟಿನಲ್ಲಿ ಕರಾವಳಿಯ ಅವರ ಜೀವನ ಸಾಧನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಜೋಡಿಸುವ ಕೆಲಸವಾಗಬೇಕು. ಅವರ ಹೆಸರಿನಲ್ಲಿ ಧತ್ತಿ ನಿಧಿ ಸ್ಥಾಪಿಸಿ ಸಮಾಜಕ್ಕೆ ಅರ್ಪಣೆಯಾಗಬೇಕು. ಉತ್ಸಾಹಿ ಯುವಕರಿಗೆ ಪದವಿ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ನೀಡಬೇಕು. ಅವರ ಭಾವಚಿತ್ರ ವಿರುವ ಸ್ಟ್ಯಾಂಪ್ನ್ನು ಕಚೇರಿಯ ಎಲ್ಲಾ ಪತ್ರಗಳಿಗೆ ಅಂಟಿಸುವ ಮೂಲಕ ಅವರ ಜೀವನ ಸಾಧನೆಯ ಪರಿಚಯವಾಗಬೇಕು. ಯುಗ ಪುರುಷನ ಸಾಧನೆ ಸಾವಿರಾರು ಮಂದಿಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಲಾಂಛನ ಬಿಡುಗಡೆ ಮಾಡಿದ ಕೃಷಿ ಸಂಶೋಧಕರಾಗಿರುವ ವಾರಾಣಾಶಿ ಸುಬ್ರಾಯ ಭಟ್ ಅವರ ಪುತ್ರ ವಾರಾಣಾಶಿ ಕೃಷ್ಣಮೂರ್ತಿ ಮಾತನಾಡಿ, ಮಧ್ಯವರ್ತಿಗಳಿಂದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಬೆಳೆಗಾರರ ಸಂಸ್ಥೆಯಾಗಿ ಕ್ಯಾಂಪ್ಕೋ ಸ್ಥಾಪನೆಯಾಗಿತ್ತು. ಕ್ಯಾಂಪ್ಕೋ ಪ್ರಾರಂಭವಾದ ಬಳಿಕ ಅಡಿಕೆ ಬೆಲೆ ಏರಿಕೆಯಾಗುತ್ತಾ ಸಾಗಿದ್ದು ೨ ರೂಪಾಯಿ ಇದ್ದ ಅಡಿಕೆ ಬೆಲೆ ೬ ರೂಪಾಯಿಗೆ ಏರಿಕೆಯಾಗಿದೆ. ಸುಬ್ರಾಯ ಭಟ್ ಅವರ ಭ್ರಷ್ಠಾಚಾರವಿಲ್ಲದ ಆಡಳಿತ ಕ್ಯಾಂಪ್ಕೋ ಭದ್ರವಾಗಿ ನೆಲೆಯೂರುವಂತೆ ಮಾಡಿದೆ. ಅಡಿಕೆ ಜಗಿಯುದು ಬಿಟ್ಟರೆ ಬೇರೇನು ಆಗಿಲ್ಲ. ಇದರ ಬಗ್ಗೆ ಸಂಶೋಧನೆ ನಡೆಸಿದೆ ಇದ್ದರೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಬಹುದಾಗಿದೆ ಎಂದು ಕಲವಳ ವ್ಯಕ್ತಪಡಿಸಿದರು.
ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಮೂರು ಹೊಸ ಉತ್ಪನ್ನಗಳಾದ ಡಾರ್ಕ್ ಚಾಕಲೇಟ್ ಪ್ರೀಮಿಯಂ ೫೫% ಕೊಕ್ಕೋ, ಡಾರ್ಕ್ ಚಾಕಲೇಟ್ ಪ್ರುಟ್ & ನಟ್ ಮತ್ತು ಕೊಕ್ಕೋ ಪೌಡರ್ ಎಂಬ ಮೂರು ಹೊಸ ಉತ್ಪನ್ನಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತ್ತು. ಪ್ರಭಾಕರ ಹೊಳ್ಳ ಉತ್ಪನ್ನಗಳ ಮಾಹಿತಿ ನೀಡಿದರು.
ವಾರಾಣಾಶಿ ಸುಬ್ರಾಯ ಭಟ್ ಅವರು ಜನ್ಮ ಶತಾಬ್ಧಿಯ ಲಾಂಛನವನ್ನು ವಾರಾಣಾಶಿ ಸುಬ್ರಾಯ ಭಟ್ ಅವರ ಪುತ್ರ ಕೃಷಿ ಸಂಶೋಧಕ ವಾರಾಣಾಶಿ ಕೃಷ್ಣಮೂರ್ತಿ ಅನಾವರಣಗೊಳಿಸಿದರು. ಸಂಸ್ಥೆಯ ಸಿಬ್ಬಂದಿ ಕಿಶೋರ್ ಅವರು ಲಾಂಛನದ ವಿನ್ಯಾಸ ಮಾಡಿರುತ್ತಾರೆ. ವಾರಾಣಾಶಿ ಸುಬ್ರಾಯ ಭಟ್ ಅವರ ಜೀವನ ಸಾಧನೆಯ ಕುರಿತ ಸಿಬ್ಬಂದಿ ಕಿಶೋರ್ ಅವರಿಂದ ನಿರ್ಮಾಣಗೊಂಡಿರುವ ಕಿರುಚಿತ್ರವು ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು.
ಇದೆ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಕ್ಯಾಂಪ್ಕೋದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ ರಾವ್,
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಕೃಷಿಕರಾಗಿರುವ ಶಂಕರ್ ಸಾರಡ್ಕ,ಉಪಾಧ್ಯಕ್ಷ ಪದ್ಮರಾಜ
ಪಟ್ಟಾಜೆ,ವ್ಯವಸ್ಥಾಪನಾ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ, ಕ್ಯಾಂಪ್ಕೋ ನಿರ್ದೇಶಕರು, ಸದಸ್ಯರು ಹಾಗೂ ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.

























