• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌.  ಬರಹ.. ರಾಧಾಕೃಷ್ಣ ಎರುಂಬು

ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌. ಬರಹ.. ರಾಧಾಕೃಷ್ಣ ಎರುಂಬು

July 11, 2024
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

September 17, 2026
ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಭರತ್ ಕುಮ್ಮೇಲು ಸಹಿತ 8 ಆರೋಪಿಗಳಿಗೆ ಜಾಮೀನು ಮಂಜೂರು

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಭರತ್ ಕುಮ್ಮೇಲು ಸಹಿತ 8 ಆರೋಪಿಗಳಿಗೆ ಜಾಮೀನು ಮಂಜೂರು

September 17, 2026
ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ  ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ

ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ

September 17, 2026
ಮಂಗಳೂರಿನಲ್ಲಿ  ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ-ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಡಳಿತ ಅನುಮೋದನೆ: ಕಾಂಗ್ರೆಸ್ ನಿಂದ ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ :-ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ

ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ-ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಡಳಿತ ಅನುಮೋದನೆ: ಕಾಂಗ್ರೆಸ್ ನಿಂದ ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ :-ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ

September 17, 2026
ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

September 15, 2026
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ  ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

September 14, 2026
ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

September 14, 2026
ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

September 13, 2026
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

September 13, 2026
ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

September 13, 2026
ಖರ್ಗೆ ಭಾಷಣದ ಸ್ಥಳ  ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ  ಮೌನ  ಪ್ರತಿಭಟನೆ

ಖರ್ಗೆ ಭಾಷಣದ ಸ್ಥಳ ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ ಮೌನ ಪ್ರತಿಭಟನೆ

September 12, 2026
ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

September 12, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, September 17, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಭರತ್ ಕುಮ್ಮೇಲು ಸಹಿತ 8 ಆರೋಪಿಗಳಿಗೆ ಜಾಮೀನು ಮಂಜೂರು

    ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಭರತ್ ಕುಮ್ಮೇಲು ಸಹಿತ 8 ಆರೋಪಿಗಳಿಗೆ ಜಾಮೀನು ಮಂಜೂರು

    ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ  ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ

    ಮಂಗಳೂರು ಸಚಿವ ಸಂಪುಟ ಸಭೆ: ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ ತುಳು ಅಧ್ಯತೆಯ ಜೊತೆಗೆ ಪುತ್ತೂರಿನ ಬೇಡಿಕೆಗಳಿಗೆ ಅನುಮೋದನೆಗೆ ಮನವಿ

    ಮಂಗಳೂರಿನಲ್ಲಿ  ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ-ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಡಳಿತ ಅನುಮೋದನೆ: ಕಾಂಗ್ರೆಸ್ ನಿಂದ ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ :-ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ

    ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ-ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಡಳಿತ ಅನುಮೋದನೆ: ಕಾಂಗ್ರೆಸ್ ನಿಂದ ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ :-ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ

    ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

    ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ  ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

    ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

    ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಇತರೆ

ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌. ಬರಹ.. ರಾಧಾಕೃಷ್ಣ ಎರುಂಬು

by ಪ್ರಜಾಧ್ವನಿ ನ್ಯೂಸ್
July 11, 2024
in ಇತರೆ
0
ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌.  ಬರಹ.. ರಾಧಾಕೃಷ್ಣ ಎರುಂಬು
10
SHARES
29
VIEWS
ShareShareShare

ಹೊಂದಾಣಿಕೆಯೆಂಬ ಪವಿತ್ರ ನಂಟು

“ಜಡೆ ಉದ್ದ ಜಡೆ ಮೊಟಕು ಎನುತ ನೀ ಗೊಣಗಿದರೆ ಬೋಳುತಲೆ ಬರಿ ನೋಟ ನಿನಗೊದಗಬಹುದು. ಅಂಗಳದ ಹೂ ಕಂಡು ಸಂತಸದಿ ಮೈ ಮರೆಯೋ! ತೃಪ್ತಿ ಭಾಗ್ಯದ ಹೊನಲು- ಮುದ್ದು ರಾಮ”. ಇಲ್ಲವುಗಳೆoಬ ಮೂಕ ಗೊಣಗುವಿಕೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದು ಸರ್ವಕ್ಕೂ ತೃಪ್ತಿದಾಯಕವೆಂಬುದು ಸರಳ ಅರ್ಥ. “ಹೊಂದಾಣಿಕೆ” ವರ್ಷ ಐದರಿಂದಲೇ ಹೊಂದಿಸಿಕೊಳ್ಳಬೇಕಾದ ಮಾನಸಿಕ ಮಂತ್ರ. ಇದು ಮನೆಯಲ್ಲಿರುವ ಸರ್ವರಲ್ಲೂ ಅಡಕವಾಗಿದ್ದರೆ “ಸ್ವರ್ಗಸುಖ”ವನ್ನು ಭ್ರಮೆಯಲ್ಲಿ ಅರಸಬೇಕಿಲ್ಲ, ನಮ್ಮೊಡನಿರುತ್ತದೆ. ಕಲಿಕೆಗೆ ತೊಡಗುವ ಮುದ್ದು ಪುಟಾಣಿಗಳಿಂದ ತೊಂಬತ್ತರ ಹಿರಿ ತಲೆಯವರೆಗೂ ಎಲ್ಲೆಂದರಲ್ಲಿ ಮಾಡಿಕೊಳ್ಳಲು ಸಾಧ್ಯವಿದ್ದರೆ ಈ ಜೀವನದಲ್ಲಿ ಬಾಧಕಗಳಿಲ್ಲದಂತೆ ಬದುಕಬಹುದು. ವಾಸ್ತವದಲ್ಲಿ ಈ ವಿಷಯದ ಕೊರತೆಯೇ ಸರ್ವ ಸಂಘರ್ಷಗಳಿಗೆ ಕಾರಣವೆಂಬುದು ಬೆತ್ತಲೆ ಸತ್ಯ. ನಮಗೆಲ್ಲ ಗೊತ್ತಿರುವ ವಾಸ್ತವಿಕ ಸಮಸ್ಯೆಯಾಗಿದ್ದರೂ, ಹಿರಿಯ-ಕಿರಿಯ, ಮೇಲು-ಕೀಳು, ಬಡವ- ಶ್ರೀಮಂತ, ಜಾಣ – ದಡ್ಡ, ಸಾಕ್ಷರ-ಅನಕ್ಷರ ಎಂಬವುಗಳ ನಡುವೆ ಬರುವ “ಅಹಂ ಮತ್ತು ಸ್ಥಿತಿಗಳು ” ತೊಡಕುಂಟು ಮಾಡುತ್ತಿದೆ. ಮನೆಯೊಳಗೆ ಅಪ್ಪ – ಮಕ್ಕಳು, ಶಾಲೆಯಲ್ಲಿ ಗುರು – ಶಿಷ್ಯ, ಸಮಾಜದಲ್ಲಿ ಆಳುವವರು – ಆಳುಗಳು, ಬಡವರು – ಧನಿಕರು, ವಿದ್ಯಾವಂತರು-ಅವಿದ್ಯಾವಂತರು, ಸ್ತ್ರೀ – ಪುರುಷರೆಂಬ ಸ್ಥಾನ ಮಾನ, ಬೇದ-ಭಾವ ಗಳ ಜೊತೆ ಸಾಗುತಿದೆ ಹೊರತಾಗಿ ಹೊಂದಾಣಿಕೆಯಿಂದ ಮೇಳೈಸುತ್ತಿದೆಯೇ? ಕೇಳಿದರೆ ಧನಾತ್ಮಕ ಉತ್ತರ ಬೆರಳೆಣಿಕೆಯಷ್ಟೇ. ಭಿನ್ನ ಸ್ಥಾನಿಕರ ನಡುವೆ ಹೊಂದಾಣಿಕೆ ಬಂದರೆ ತಮ್ಮ ಸ್ಥಾನ-ಮಾನಕ್ಕೆ ಕುಂದು ಬರುತ್ತದೋ ಎನ್ನೋ ಭಯ ಕಾಡುತಿದೆ ಸಾಮರ್ಥ್ಯವಂತರಿಗೆ. ಇದಂತೂ ವೇದಗಳ ಯುಗದಿಂದಲೂ ಬಿಡಿಸಲಾಗದ ಬಂಧ.ಅಲ್ಲಿ ಸಮಾಧಾನವಿತ್ತು, ಯಾಕೆಂದರೆ ಕೆಲಸ ನಿರ್ವಹಣೆಯ ಮೇಲೆ ವರ್ಣ, ಬಿಂಬಿತವಾಗಿತ್ತು. ” ಲೋಕದ ಡೊಂಕ ನೀವೇಕೆ ತಿದ್ದುವಿರಿ ” ಎಂಬುದಕ್ಕೆ ಮನ್ನಣೆಯಿತ್ತು, ಮನೆಯೊಳಗಿನ ಹೊಂದಾಣಿಕೆ ಯ ಬಗೆಗೆ ನಮ್ಮೆಲ್ಲರ ಅನುಭವಗಳ ಬಗ್ಗೆ ಯೋಚಿಸಿ. ಹೆಣ್ಣು ಅಕ್ಕನೋ, ಅಮ್ಮನೋ, ಅತ್ತೆಯೋ, ಅಜ್ಜಿಯೋ ಆಗುತ್ತಾಳೆ. ಅಂತೆಯೇ ಗಂಡು ಅಣ್ಣನೋ, ಅಪ್ಪನೋ,ಮಾವನೋ ಅಜ್ಜನೋ ಆಗುತ್ತಾನೆ. ಒಂದೇ ತಲೆಮಾರಿನಲ್ಲಿ ಸಂಬಂಧದ ವಿಭಿನ್ನ ವೇಷ ತೊಡುವ ಸ್ತ್ರೀ ಮತ್ತು ಪುರುಷ ಮನಸ್ಸುಗಳು ಸಮಾನವಾಗಿ ಇರುವುದಕ್ಕಿಲ್ಲ ಎಂಬುದು ಅವರವರ ವಯೋಮಾನಕ್ಕನುಗುಣವಾಗಿ ಅನುಭವವೇದ್ಯ. ಅಲ್ಲಿ ಮನಸ್ಸಿನ ಬದಲಾವಣೆಯಾಗಿಲ್ಲವೆಂದಾದರೆ ಅವನು ಯಾ ಅವಳು ಶ್ರೇಷ್ಠ ವ್ಯಕ್ತಿಗಳೆಂದೇ ಹೇಳಬಹುದು. ಸ್ವ- ಸಹೋದರತೆ ಅನ್ಯರಲ್ಲಿಯೂ , ಸ್ವಂತ ಮಕ್ಕಳ ಪ್ರೀತಿ ಇತರರೊಂದಿಗೂ , ಮಗಳ ಪ್ರೀತಿ ಸೊಸೆಯಲ್ಲಿ, ಮೊಮ್ಮಕ್ಕಳ ಮಮತೆ ಇತರರಲ್ಲಿ ಎಷ್ಟಾದರೂ ವಿರಳವೆ. ಮಾತಿಗೆ ಕೃತಕತೆ ಬರಬಹುದಷ್ಟೇ, ಆದರೆ ನೈಜತೆ ಅಸಾಧ್ಯ. ಆದರೂ ಪ್ರಸ್ತುತ ಅಲ್ಲೆಲ್ಲ “ಹೊಂದಾಣಿಕೆ” ಬಹಳಷ್ಟು ದೊಡ್ಡ ಪಾತ್ರ ವಹಿಸುತ್ತದೆ.ಯಾಕೆಂದರೆ ಜೀವಿಯು ಒಬ್ಬನೇ ಹುಟ್ಟಿ ಒಬ್ಬನೇ ಸಾಯುತ್ತಾನೆ. “ಉನ್ಮತ್ತ ಇವ ಸಜ್ಞೆಯೋ ನಾಸ್ತಿ ಕಶ್ಚಿದ್ದಿ ಕಸ್ಯಚಿತ್” ಎಂಬಂತೆ ಬೇರೆ ಊರಿಗೆ ಹೋಗುವವನು ಧರ್ಮಶಾಲೆಯಲ್ಲಿ ರಾತ್ರಿ ಉಳಿದುಕೊಂಡು ಮರುದಿನ ಆ ಧರ್ಮಶಾಲೆಯನ್ನು ಬಿಟ್ಟು ಹೋಗುವಂತೆಯೇ ತಂದೆ, ತಾಯಿ, ಹೆಂಡತಿ, ಮನೆ, ಸಂಪತ್ತು ಇದೆಲ್ಲ ತಂಗುದಾಣಗಳಷ್ಟೇ. ಹೇಳದೆ ಕೇಳದೆ ಕರೆ ಬಂದಾಗ ಹೋಗಬೇಕಾದವರೇ ಎಲ್ಲರೂ. ಈ ನಡುವೆ ಆಪ್ತರಾಗಿ ಬಾಳುವ ಹೊಂದಾಣಿಕೆ ಇಲ್ಲದಿದ್ದರೆ ಏನು ಫಲ. ಹೊಂದಾಣಿಕೆಯ ಕಲಿಕೆ ಅಲ್ಪ ಹಿರಿಯರಿಂದಲೂ ಉಳಿದದ್ದು ನಮ್ಮ ಮನಸ್ಸಿನಿಂದಲೇ ಆಗಬೇಕಾಗಿರುವುದು . ನಾವು ಮಾಡಿರುವುದನ್ನು ನಮ್ಮವರು ಕಲಿಯುತ್ತಾರಷ್ಟೇ… ಈ ಬಗ್ಗೆ ಪ್ರಸ್ತುತ ತಲೆಮಾರಿನಲ್ಲಿ ಸ್ವಲ್ಪದರ ಮಟ್ಟಿಗೆ ಹಿರಿಯರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು. ಯಾಕೆಂದರೆ ನಮ್ಮವರು, ಹಿಂದೆ ಹಾಗಿದ್ದರು- ಹೀಗಿದ್ದರು ಎನ್ನುವ ಅಂತೆ-ಕಂತೆಗಳನ್ನು ಕೇಳುವ ವ್ಯವಧಾನ ನಮ್ಮ ಮಕ್ಕಳಿಗಿಲ್ಲ. ಅವರ ವ್ಯವಸ್ಥೆಗೆ ನಾವು ಹೊಂದಿಕೊಳ್ಳಬೇಕಷ್ಟೆ. ಹಾಗಾದಾಗ ಮಾತ್ರ ನಾವು ನಮ್ಮ ಸ್ವಂತ ಮಕ್ಕಳೊಂದಿಗೆ ಬದುಕಬಹುದು, ಇಲ್ಲವಾದರೆ ಮುದುಕರು ಆಶ್ರಮದಲ್ಲೋ ಅಥವಾ ಎಲ್ಲಾದರೊಂದುಕಡೆ “ಮಕ್ಕಳು ನಮ್ಮನ್ನು ಬಿಟ್ಟು ಬಿಟ್ಟರು” ಎಂಬ ಕಥೆಯೊಂದಿಗೆ ಇರಬೇಕಾದೀತು. ನಾನಂದಂತೆ ಆಗಬೇಕು ಎಂಬ ಹಠವೂ ಕೆಲವೊಮ್ಮೆ ಅನರ್ಥಕ್ಕೇರುತ್ತದೆ. ಇಲ್ಲೆಲ್ಲ ನಾವೆಲ್ಲರೂ ಸ್ವಲ್ಪ ವಿಷಯದ ಮತ್ತು ವ್ಯಕ್ತಿಗಳ ನಡುವೆ ಹೊಂದಾಣಿಕೆಯ ಸೇತುವಾಗಿ ವರ್ತಿಸಬೇಕಾಗುತ್ತದೆ. ಕೆಲವೊಮ್ಮೆ ಈ ಆಂಗ್ಲ ಭಾಷೆಯ “ಅಡ್ಜಸ್ಟ್ಮೆಂಟ್ ” ಏನನ್ನೂ ಸಾದಿಸುತ್ತದೆ ಹಲವು ಬಾರಿ ಬಾಧಿಸುತ್ತದೆ. ಹೊಂದಾಣಿಕೆಯಿಲ್ಲದ ಬದುಕು ಕುಟುಂಬಕ್ಕೆ, ಸಮಾಜಕ್ಕೆ, ರಾಜ್ಯ, ದೇಶಕ್ಕೆ ಮಾರಕವೆ. ದೇಹದ ರಚನೆ ಯಲ್ಲಿ ಹೊಂದಾಣಿಕೆಯ ಪಾಠವಿದೆ. ನಾಲಿಗೆ ಆಶಿಸುವುದನ್ನು ಕೈ ನೀಡದಿದ್ದರೆ, ಕಾಲು ತರಲು ಹೊರಡದಿದ್ದರೆ, ಹೊಟ್ಟೆ ಬಯಸಿದ್ದನ್ನು ಬಾಯಿ ಕೊಡದಿದ್ದರೆ ದೇಹ ತಟಸ್ಥವಾಗಿ ಮಣ್ಣು ಸೇರಬಹುದು. ಬದುಕಿನಲ್ಲೂ ಅಷ್ಟೆ ವ್ಯತ್ಯಾಸಗಳನ್ನು ನುಂಗಿ ಹೊಂದಾಣಿಕೆಯ ಬದುಕಿಗಿರುವ ಬೆಲೆ ಅಹಂ- ಸ್ವಾರ್ಥ ಬದುಕಿಗಿಲ್ಲ. ಇದ್ದರೂ ಅದಕ್ಕೆ ಬಾಳ್ವೆ ಇಲ್ಲ. ನಾನೂ ಹೊಂದಾಣಿಕೆಗೆ ಪ್ರಯತ್ನಿಸುತ್ತೇನೆಂಬ ಯೋಚನೆಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇನೆ. ಅದಕ್ಕೇ ಹೇಳುತ್ತಿದ್ದೇನೆ “ಹೊಂದಾಣಿಕೆ” ಪವಿತ್ರ ಮಂತ್ರ ಇದು ಮನದೊಳಗೆ ಮೊಳಕೆಯೊಡೆದು ವಾಸ್ತವದಲ್ಲಿ ಬೆಳೆಯಬೇಕಾದುದು ಬೆಳೆಸೋಣವೇ?

8722552464 Astrloger

ಜಾಹೀರಾತು

*🖊️ರಾಧಾಕೃಷ್ಣ ಎರುಂಬು

ಜಾಹೀರಾತು

SendShare4Share
Previous Post

ಪುತ್ತೂರು: ಸರಕಾರಿ‌ಆಸ್ಪತ್ರೆಗೆ‌ ಆರೋಗ್ಯ ರಕ್ಷಾ‌ಸಮಿತಿ ಸದಸ್ಯರ ದಿಡೀರ್ ಭೇಟಿ

Next Post

ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..