ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ (39.ವ) ಅಲ್ಪಕಾಲದ ಅಸೌಖ್ಯದಿಂದ ಮೇ.20ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಈ ಹಿಂದೆ ಹಲವು ವರ್ಷಗಳಿಂದ ಇವರು ಉರ್ಲಾಂಡಿಯಲ್ಲಿ ನೆಲೆಸಿದ್ದರು. ಕಳೆದ 11 ವರ್ಷಗಳಿಂದ ದುಬೈಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಊರಿಗೆ ಆಗಮಿಸಿದ್ದರು. ನಂತರ ಗುಣಮುಖರಾದ ಇವರು ಪುನಃ ಉದ್ಯೋಗಕ್ಕೆ ದುಬೈಗೆ ತೆರಳಿದ್ದರು. ಆದರೆ ಕಾಯಿಲೆ ಮತ್ತೆ ಉಲ್ಬಣಗೊಂಡಿದ್ದು, ಊರಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ.20ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಮೃತರು ತಂದೆ ಉಮೇಶ್, ತಾಯಿ ವನಿತಾ, ಚಿಕ್ಕಮ್ಮ ಅಂಜಲಿ, ಸಹೋದರರಾದ ಅವಿನಾಶ್, ಸಂದೀಪ್, ಸಹೋದರಿ ಕವಿತಾ, ಪತ್ನಿ ಶ್ರೀಮಾ, ಪುತ್ರಿ ನಿಧಿಮಾ, ಬಂಧು-ಮಿತ್ರರನ್ನು ಅಗಲಿದ್ದಾರೆ.

























