ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಲು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೖಯವರು ಸತಾಯಿಸಿದ ಕಾರಣ ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಗಿರಿಧರ್ ನಾಯ್ಕ ನೇತೃತ್ವದಲ್ಲಿ ನಡೆದ ಧರಣಿ ಹೋರಾಟಕ್ಕೆ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಸಂಸದರಾದ ಬ್ರಜೇಶ್ ಚೌಟರವರು ಹಾಗೂ ಪುತ್ತೂರು ಬಿಜೆಪಿ ಹಾಗೂ ಬಂಟ್ವಾಳ ಬಿಜೆಪಿ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ಬಡ ಪರಿಶಿಷ್ಟ ಪಂಗಡ ಕುಟುಂಬದೊಂದಿಗೆ ನಿಂತು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಇವತ್ತು ದಿನಾಂಕ 21/05/26ರಂದು ಮತ್ತೆ ಪ್ರತಿಭಟನೆ ಮುಂದುವರಿದಾಗ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕರವರು ಭೇಟಿ ನೀಡಿ ಧರಣಿ ನಿರತರೊಂದಿಗೆ ಮಾತಾನಾಡಿ ತಹಶೀಲ್ದಾರ್ ನ್ನು ಭೇಟಿಯಾಗಿ ಮಾತುಕತೆ ನಡೆಸಿ ದಿನಾಂಕ 26/05/26ರಂದು ಪೆರ್ಣೆ ಗ್ರಾಮದಲ್ಲಿ ನಡೆಯುವ ಬಗರ್ ಹುಕುಂ ಸಭೆಯಲ್ಲಿ ಹಕ್ಕು ಪತ್ರ ನೀಡುವುದೆಂದು ದಂಢಾಧಿಕಾರಿಗಳು ಶಾಸಕರಾದ ರಾಜೇಶ್ ನಾಯ್ಕ್ ರವರಿಗೆ ಭರವಸೆ ನೀಡಿದ ಕಾರಣ ಹಕ್ಕುವಂಚಿತ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿ ನಿಗದಿಯಾದ ದಿನಾಂಕದಂದು ಕೊಟ್ಟಿಲ್ಲ ಅಂದ್ರೇ ಮತ್ತೆ ಪ್ರತಿಭಟನೆ ಮುಂದುವರಿಸುವುದಕ್ಕೆ ನಾನು ಕೂಡ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದರು,ತದನಂತರ ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಧರಣಿ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ರೊಂದಿಗೆ ಮಾತುಕತೆ ನಡೆಸಿ ಲಿಖಿತ ರೂಪದಲ್ಲಿ ಪಡೆದುಕೊಂಡು ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಮುಂದೂಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜ್ರೆಮಾರು,ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್,ಸುದರ್ಶನ್ ಬಜ,ಹರೀಶ್ ಬಿಜತ್ರೆ,ಹರಿಪ್ರಸಾದ್ ಯಾದವ್,ಲೋಕೇಶ್ ಚಾಕೋಟೆ,ವಿದ್ಯಾಧರ್ ಜೈನ್ ರಾಜೇಶ್ ಬಾಳೆಕಲ್ಲು,ಉದಯ ವಿಟ್ಲ,ಹರೀಶ್ ವಿಟ್ಲ,ಕಿರಣ್ ಶೆಟ್ಟಿ,ಕಿರಣ್ ರೖ,ಮಾಧವ ಮಾವೆ,ರೋನಿ ಡಿಸೋಜ,ದಿನೇಶ್ ಅಮ್ಟೂರು,ನಿತೇಶ್ ಕುಮಾರ್ ಶಾಂತಿವನ,ಪುರುಷೋತ್ತಮ್ ಮುಂಗ್ಲಿಮನೆ,ಹಾಗೂ ಹಕ್ಕು ಪತ್ರ ಫಲಾನುಭವಿಗಳಾದ ಪ್ರೇಮಾ,ಬೇಬಿ,ವಿಜಯಲಕ್ಷ್ಮಿಯವರು ಉಪಸ್ಥಿತರಿದ್ದರು.

























