ಪುತ್ತೂರು : ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಕುಮಾರಧಾರ ನದಿಗೆ ಸ್ನಾನ ಮಾಡಲು ಹೋದ ನಾಲ್ವರು ವಿದ್ಯಾರ್ಥಿಗಳ ಪೈಕಿ ಓರ್ವ ನೀರುಪಾಲಾದ ಘಟನೆ ನಡೆದಿದೆ.
ಮೃತ ಯುವಕನು ಪುತ್ತೂರಿನ ಕಾಲೇಜು ವಿದ್ಯಾರ್ಥಿಯಾಗಿದ್ದು ಮೂಲತಃ ಗದಗದವನು ಎಂದು ತಿಳಿದು ಬಂದಿದೆ.
ಮೃತ ದೇಹ ಪತ್ತೆಹಚ್ಚಲು ವಿಶ್ವನಾಥ ಗೌಡ ಗಣೇಶ್ ಗೌಡ ಬರ್ತೋಳಿ, ರಾಮಣ್ಣಗೌಡ ಗುಂಡೋಳೆ, ಶೀನಪ್ಪ ಗೌಡ, ಪೂವಪ್ಪ ಗೌಡ, ಜಗದೀಶ್ ಅಂದ್ರೀಗೇರು, ಕುಶಾಲಪ್ಪ ಗೌಡ ಮತ್ತು ಚೆನ್ನಪ್ಪ ಗೌಡ ಸಹಕರಿಸಿದರು.
ಇತ್ತೀಚೆಗೆ ವಿದ್ಯಾರ್ಥಿಗಳು ಪ್ರವಾಸ ಹೆಸರಿನಲ್ಲಿ ಬೀಚ್ ಸಮುದ್ರ ಮತ್ತು ಫಾಲ್ಸ್ ಗಳಿಗೆ ತೆರಳಿ ಹಲವು ಕಡೆ ದುರಂತಗಳು ಸಂಭವಿಸಿದೆ. ಆದರೂ ಕೂಡ ಜನರ ಅಜಾಗ್ರತೆಯಿಂದ ಇಂತಾ ಘಟನೆಗಳು ನಡೆಯುತ್ತಲೇ ಇದೆ. ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಸಾರ್ವಜನಿಕರ ಅಸಹಕಾರದಿಂದ ದುರಂತಗಳು ನಡೆಯುತ್ತಲೇ ಇದೆ. ಹಲವು ಕಡೆ ಹೆಚ್ಚಾಗಿ ವಿದ್ಯಾರ್ಥಿಗಳೇ ಈ ಒಂದು ಘಟನೆಗೆ ಬಲಿಯಾಗುತ್ತಿದ್ದಾರೆ.

























