ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಹೊರತು ಸಾರ್ವಜನಿಕ ರಸ್ತೆ ಅಲ್ಲ. ರಸ್ತೆ ನಿರ್ಮಾಣ ಮಾಡಲು ತಾಯರಿ ನಡೆಸುತಿರುವಾಗ ಭಕ್ತರು ಅನ್ಯ ಕಾರಣ ಗಳಿಂದ ಅಡ್ಡಿ ಪಡಿಸಲು ಯತ್ನ ಅಧ್ಯಕ್ಷರಿಂದ ಪತ್ರಿಗೋಷ್ಠಿ ದೇವಳದ ವಠಾದಲ್ಲಿ ಗೋವುಗಳ ಕಳವು, ರಾತ್ರಿ ವಾಹನ ಓಡಾಟ, ಕಸ ಹಾಕುವುದು, ರಥ ಬೀದಿಯಲ್ಲಿ ಆಂಬುಲೆನ್ಸ್ ಸಂಚಾರ ಮತ್ತು ಏಕಮುಖ ರಸ್ತೆಯ ಸಮಸ್ಯೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಬಂದ ಮನವಿಗಳ ಮೇರೆಗೆ ಮಹಾಲಿಂಗೇಶ್ವರ ದೇವಸ್ಥಾನದ ತೋಡಿನ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.
ಶಾಸಕರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಈ ನಿರ್ಧಾರದಂತೆ ಸುಮಾರು ರೂ. 4 ಕೋಟಿ ವೆಚ್ಚದಲ್ಲಿ 30 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ರಥ ಬೀದಿಯು ರಥ ಬೀದಿಯಾಗಿಯೇ ಶುದ್ಧತೆಯಿಂದ ಇರಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದರು.
ಆ.3ರಂದು ದೇವಳದ ಆಡಳಿತ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ರಸ್ತೆ ದೇವಸ್ಥಾನದ ಸೊತ್ತು ಹೊರತು ಸಾರ್ವಜನಿಕ ರಸ್ತೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಸ್ತೆ ವಿಚಾರವಾಗಿ ಗೊಂದಲ ಸೃಷ್ಟಿಸಿ ಪ್ರಶ್ನೆಗಳನ್ನು ಕೇಳುವವರಿಗೆ ಉತ್ತರಿಸಿದ ಅವರು, “ರಸ್ತೆ ವಿಚಾರವಾಗಿ ಕರೆದ ಭಕ್ತರ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಬಹುದಿತ್ತಲ್ಲ” ಎಂದು ಪ್ರಶ್ನಿಸಿದರು.
























