ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಹೊರತು ಸಾರ್ವಜನಿಕ ರಸ್ತೆ ಅಲ್ಲ. ರಸ್ತೆ ನಿರ್ಮಾಣ ಮಾಡಲು ತಾಯರಿ ನಡೆಸುತಿರುವಾಗ ಭಕ್ತರು ಅನ್ಯ ಕಾರಣ ಗಳಿಂದ ಅಡ್ಡಿ ಪಡಿಸಲು ಯತ್ನ ಅಧ್ಯಕ್ಷರಿಂದ ಪತ್ರಿಗೋಷ್ಠಿ ದೇವಳದ ವಠಾದಲ್ಲಿ ಗೋವುಗಳ ಕಳವು, ರಾತ್ರಿ ವಾಹನ ಓಡಾಟ, ಕಸ ಹಾಕುವುದು, ರಥ ಬೀದಿಯಲ್ಲಿ ಆಂಬುಲೆನ್ಸ್ ಸಂಚಾರ ಮತ್ತು ಏಕಮುಖ ರಸ್ತೆಯ ಸಮಸ್ಯೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಬಂದ ಮನವಿಗಳ ಮೇರೆಗೆ ಮಹಾಲಿಂಗೇಶ್ವರ ದೇವಸ್ಥಾನದ ತೋಡಿನ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.
ಶಾಸಕರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಈ ನಿರ್ಧಾರದಂತೆ ಸುಮಾರು ರೂ. 4 ಕೋಟಿ ವೆಚ್ಚದಲ್ಲಿ 30 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ರಥ ಬೀದಿಯು ರಥ ಬೀದಿಯಾಗಿಯೇ ಶುದ್ಧತೆಯಿಂದ ಇರಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದರು.
ರಸ್ತೆಗೆ ಅನಗತ್ಯ ವಿರೋಧ
ದೇವಸ್ಥಾನದ ಬದಿಯಿಂದ ರಸ್ತೆ ನಿರ್ಮಾಣ ಮಾಡುವ ಯೋಜನೆಯ ಬಗ್ಗೆ ಈ ಮೊದಲೇ ತಿಳಿಸಲಾಗಿತ್ತು. ಭಕ್ತರ ಸಭೆ ಕರೆದು, ಎಲ್.ಇ.ಡಿ. ಪರದೆಯ ಮೂಲಕ ಮಾಸ್ಟರ್ ಪ್ಲ್ಯಾನ್ ಅನ್ನು ವಿವರಿಸಿ ಹೊಸ ರಸ್ತೆಯನ್ನು ನಿರ್ಮಿಸುವ ತೀರ್ಮಾನಕ್ಕೆ ಬರಲಾಗಿತ್ತು. ಇದು ರಥಬೀದಿಯ ಪಾವಿತ್ರ್ಯತೆಯನ್ನು ಉಳಿಸಲು ಅನುಕೂಲ. ಆದರೆ ಇದೀಗ ಅನಗತ್ಯ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸ್ವರ್ಣ ಕವಚಕ್ಕೆ 300 ಗ್ರಾಂ ಚಿನ್ನ
ಸ್ವರ್ಣ ಕವಚಕ್ಕೆ ಈಗಾಗಲೇ 300 ಗ್ರಾಂಗಿಂತಲೂ ಅಧಿಕ ಚಿನ್ನ ಸಮರ್ಪಣೆ, ದೇಣಿಗೆ ಸಮರ್ಪಣೆ, ತುಪ್ಪ ಸೇವೆ, ಎಳ್ಳೆಣ್ಣೆ ಅಭಿಷೇಕ, 40 ಲಕ್ಷ ರೂ. ಮೌಲ್ಯದ ಅಕ್ಕಿ ಸಮರ್ಪಣೆ, ಶಿಲಾಮಯ ಕಟ್ಟೆಗಳ ನಿರ್ಮಾಣ ಕಾರ್ಯ ನಡೆದಿದೆ. ಅನ್ನಪ್ರಸಾದ ವಿತರಣೆಯೂ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಕಟ್ಟಿಗೆ, ಗ್ಯಾಸ್ ವೆಚ್ಚ ಕಡಿತ ಮಾಡಲು ಸ್ಟೀಮ್ ವ್ಯವಸ್ಥೆಯನ್ನೂ ಮಾಡಿದ್ದೇವೆ.
ಆ.3ರಂದು ದೇವಳದ ಆಡಳಿತ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ರಸ್ತೆ ದೇವಸ್ಥಾನದ ಸೊತ್ತು ಹೊರತು ಸಾರ್ವಜನಿಕ ರಸ್ತೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಸ್ತೆ ವಿಚಾರವಾಗಿ ಗೊಂದಲ ಸೃಷ್ಟಿಸಿ ಪ್ರಶ್ನೆಗಳನ್ನು ಕೇಳುವವರಿಗೆ ಉತ್ತರಿಸಿದ ಅವರು, “ರಸ್ತೆ ವಿಚಾರವಾಗಿ ಕರೆದ ಭಕ್ತರ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಬಹುದಿತ್ತಲ್ಲ” ಎಂದು ಪ್ರಶ್ನಿಸಿದರು.
ಎಲ್ಲವೂ ಕೂಡ ನಿಯಮಾವಳಿಯಂತೆ ನಡೆಯುತ್ತಿದ್ದು, ಅನುಮಾನಗಳಿದ್ದರೆ ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆಯಲಿ. ಭಕ್ತರು ಯಾವುದೇ ಅಪಪ್ರಚಾರಗಳಿಗೆ ಕಿವಿಕೊಡಬಾರದು ಎಂದರು. ಮುಂದೆ ಆ. 15ರ ಬಳಿಕ ಟೆಂಡರ್ ಕರೆದು ನೂತನ ಸಭಾಭವನಕ್ಕೆ ಶಿಲಾನ್ಯಾಸ ನಡೆಯಲಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡು ಬ್ರಹ್ಮಕಲಶ ನಡೆಯಲಿದೆ ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಈಶ್ವರ ಬೆಡೇಕರ್, ನಳಿನಿ ಪಿ.ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪಾಡಿ ಉಪಸ್ಥಿತರಿದ್ದರು

























