ಗರಿಗೆದರಿದ ವಿಧಾನಪರಿಷತ್ ಚುನಾವಣೆ ಪುತ್ತೂರಿನಲ್ಲಿ ರಘಪತಿ ಭಟ್ ಭರ್ಜರಿ ಮತಯಾಚನೆ
ವಿಧಾನಪರಿಷತ್ ಚುನಾವಣಾ ದಿನದಿಂದ ದಿನಕ್ಕೆ ಕಾವೇರುತ್ತಿದೆ ಎರಡು ದಿನಗಳ ಮತಯಾಚನೆ ಮೂಲಕ ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಲಿದೆ. ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ಡೈನಾಮಿಕ್ ಲೀಡರ್ ರಘಪತಿ ಭಟ್ ಸ್ಪರ್ಧಿಸಿದ್ದು ಈ ದಿನ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಪಡೆದು ಪ್ರಚಾರ ಆರಂಭಿಸಿದರು.
ಮಹಾಲಿಂಗೇಶ್ವರ ದೇವಾಲಯದಲ್ಲಿ ಬಿಜೆಪಿಯ ಹಿರಿಯರಾದ ಡಾ.ಪ್ರಸಾದ್ ಭಂಡಾರಿಯವರ ಆಶೀರ್ವಾದ ಪಡೆದುಕೊಂಡು ನಂತರ ಅಂಬಿಕಾ ಪದವಿ ಪೂರ್ವ ಕಾಲೇಜ್, ಅಕ್ಷಯ ಕಾಲೇಜ್, ಬಾರ್ ಅಸೋಸಿಯೇಷನ್ ವಕೀಲರ ಜತೆ ಮತಯಾಚನೆಯ ನಂತರ ತಾಲೂಕಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಪ್ರತಿಷ್ಠಿತ ವಿವೇಕಾನಂದ ಕಾಲೇಜಿನಲ್ಲಿ ಮತಯಾಚನೆ ನಡೆದಿದರು. ವಿವೇಕಾನಂದ ಕಾಲೇಜಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಭಟ್ ನನಗೆ ಕರಾವಳಿ ಭಾಗ ಅಲ್ಲದೇ ಮಲೆನಾಡು ಭಾಗದಲ್ಲಿ ಸಹ ಬೆಂಬಲವನ್ನು ಸೂಚಿಸಿದ್ದಾರೆ. ಖಂಡಿತವಾಗಿಯೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸ ಇದೆ.
ಪ್ರತಿಯೊಬ್ಬರೂ ಆತ್ಮೀಯತೆಯಿಂದ ಸ್ವಾಗತಿಸಿ ಬೆಂಬಲ ಸೂಚಿಸಿದ್ದಾರೆ. ನೈಜ ಕಾರ್ಯಕರ್ತರ ಧ್ವನಿಯಾಗಿ ಪದವೀಧರ ಕ್ಷೇತ್ರದ ಸಮಸ್ಯೆ ಸ್ಪಂದಿಸುವುದೇ ನನ್ನ ಮೊದಲ ಗುರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಾರಂ ಭಟ್ , ನವೀನ್ ಕುಲಾಲ್ ಹಾಗು ಪ್ರಮುಖರು ಉಪಸ್ಥಿತರಿದ್ದರು