• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

July 10, 2024
ಡೇಟಿಂಗ್ ಆ್ಯಪ್‌ಗಳ ಮೂಲಕ ಸುಂದರಿ ಸ್ನೇಹ ಮಾಡಿ ಕೋಟಿ ಕಳೆದುಕೊಂಡ ಅಮಾಯಕ!

ಡೇಟಿಂಗ್ ಆ್ಯಪ್‌ಗಳ ಮೂಲಕ ಸುಂದರಿ ಸ್ನೇಹ ಮಾಡಿ ಕೋಟಿ ಕಳೆದುಕೊಂಡ ಅಮಾಯಕ!

November 13, 2025
ಬೆಳ್ತಂಗಡಿ:14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ:14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

November 13, 2025
ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದ ಸ್ವರ್ಣೋದ್ಯಮಿ

ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದ ಸ್ವರ್ಣೋದ್ಯಮಿ

November 13, 2025
ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್ ಪೂಜಾರಿ ನೇಮಕ

ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್ ಪೂಜಾರಿ ನೇಮಕ

November 13, 2025
ಆಲ್ಕೋಹಾಲ್ (ಮದ್ಯ) ಸೇವನೆಯು ದೇಹದ ಮೇಲೆ ಬಹುಮಟ್ಟಿನ ಕಾಲಿಕ ಮತ್ತು ದೀರ್ಘಕಾಲಿಕ  ಹಾನಿಕಾರಕ ಪರಿಣಾಮಗಳು

ಆಲ್ಕೋಹಾಲ್ (ಮದ್ಯ) ಸೇವನೆಯು ದೇಹದ ಮೇಲೆ ಬಹುಮಟ್ಟಿನ ಕಾಲಿಕ ಮತ್ತು ದೀರ್ಘಕಾಲಿಕ ಹಾನಿಕಾರಕ ಪರಿಣಾಮಗಳು

November 13, 2025
ಕಬ್ಬು ಜ್ಯೂಸ್ ಬಿಸಿ ಕಾಲದಲ್ಲಿ ತಂಪು ನೀಡುವಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಉಪಯುಕ್ತ; ಪ್ರಮುಖ ಪ್ರಯೋಜನಗಳು

ಕಬ್ಬು ಜ್ಯೂಸ್ ಬಿಸಿ ಕಾಲದಲ್ಲಿ ತಂಪು ನೀಡುವಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಉಪಯುಕ್ತ; ಪ್ರಮುಖ ಪ್ರಯೋಜನಗಳು

November 13, 2025
“ಲೇಡಿ ಸೂಪರ್ ಸ್ಟಾರ್” ನಯನತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

“ಲೇಡಿ ಸೂಪರ್ ಸ್ಟಾರ್” ನಯನತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

November 13, 2025
ಪುತ್ತೂರು ರಸ್ತೆ ಸ್ಥಿತಿ – ಜನರ ಕಷ್ಟಕ್ಕೆ ಯಾರ ಸ್ಪಂದನೆ? ರಸ್ತೆ ತುಂಬಾ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರಿಗೆ ಪ್ರತಿದಿನ ತೊಂದರೆ

ಪುತ್ತೂರು ರಸ್ತೆ ಸ್ಥಿತಿ – ಜನರ ಕಷ್ಟಕ್ಕೆ ಯಾರ ಸ್ಪಂದನೆ? ರಸ್ತೆ ತುಂಬಾ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರಿಗೆ ಪ್ರತಿದಿನ ತೊಂದರೆ

November 13, 2025
ಯುವತಿ ಅತ್ಯಾಚಾರ ಯತ್ನ: ಕಾಮುಕನಿಗೆ ಸ್ಥಳೀಯರಿಂದ ಧರ್ಮದೇಟು

ಯುವತಿ ಅತ್ಯಾಚಾರ ಯತ್ನ: ಕಾಮುಕನಿಗೆ ಸ್ಥಳೀಯರಿಂದ ಧರ್ಮದೇಟು

November 12, 2025
ಪುತ್ತೂರಿನಲ್ಲಿ ನ.16ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಿರೀಕ್ಷೆಗೂ ಮೀರಿ ಜನಸಾಗರ ಸಾಧ್ಯತೆ – ಕಾವು ಹೇಮನಾಥ ಶೆಟ್ಟಿ

ಪುತ್ತೂರಿನಲ್ಲಿ ನ.16ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಿರೀಕ್ಷೆಗೂ ಮೀರಿ ಜನಸಾಗರ ಸಾಧ್ಯತೆ – ಕಾವು ಹೇಮನಾಥ ಶೆಟ್ಟಿ

November 12, 2025
ಪುತ್ತೂರು-ಉಪ್ಪಿನಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಅನಧಿಕೃತ ಅಂಗಡಿಯನ್ನು ತೆರವು; ಬದಲಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಶಾಸಕ ಅಶೋಕ್ ರೈ

ಪುತ್ತೂರು-ಉಪ್ಪಿನಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಅನಧಿಕೃತ ಅಂಗಡಿಯನ್ನು ತೆರವು; ಬದಲಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಶಾಸಕ ಅಶೋಕ್ ರೈ

November 12, 2025
ಶ್ರೀನಿವಾಸ ಕಲ್ಯಾಣ,ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಪೂರ್ವಭಾವಿಯಾಗಿ ಸೀತಾ ಪರಿವಾರದ ಪ್ರಮುಖರ ಸಭೆ

ಶ್ರೀನಿವಾಸ ಕಲ್ಯಾಣ,ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಪೂರ್ವಭಾವಿಯಾಗಿ ಸೀತಾ ಪರಿವಾರದ ಪ್ರಮುಖರ ಸಭೆ

November 12, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, November 14, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಳ್ತಂಗಡಿ:14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಳ್ತಂಗಡಿ:14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

    ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದ ಸ್ವರ್ಣೋದ್ಯಮಿ

    ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಬಂದ ಸ್ವರ್ಣೋದ್ಯಮಿ

    ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್ ಪೂಜಾರಿ ನೇಮಕ

    ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್ ಪೂಜಾರಿ ನೇಮಕ

    ಕಬ್ಬು ಜ್ಯೂಸ್ ಬಿಸಿ ಕಾಲದಲ್ಲಿ ತಂಪು ನೀಡುವಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಉಪಯುಕ್ತ; ಪ್ರಮುಖ ಪ್ರಯೋಜನಗಳು

    ಕಬ್ಬು ಜ್ಯೂಸ್ ಬಿಸಿ ಕಾಲದಲ್ಲಿ ತಂಪು ನೀಡುವಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಉಪಯುಕ್ತ; ಪ್ರಮುಖ ಪ್ರಯೋಜನಗಳು

    “ಲೇಡಿ ಸೂಪರ್ ಸ್ಟಾರ್” ನಯನತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

    “ಲೇಡಿ ಸೂಪರ್ ಸ್ಟಾರ್” ನಯನತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

    ಪುತ್ತೂರು ರಸ್ತೆ ಸ್ಥಿತಿ – ಜನರ ಕಷ್ಟಕ್ಕೆ ಯಾರ ಸ್ಪಂದನೆ? ರಸ್ತೆ ತುಂಬಾ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರಿಗೆ ಪ್ರತಿದಿನ ತೊಂದರೆ

    ಪುತ್ತೂರು ರಸ್ತೆ ಸ್ಥಿತಿ – ಜನರ ಕಷ್ಟಕ್ಕೆ ಯಾರ ಸ್ಪಂದನೆ? ರಸ್ತೆ ತುಂಬಾ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರಿಗೆ ಪ್ರತಿದಿನ ತೊಂದರೆ

    ಪುತ್ತೂರಿನಲ್ಲಿ ನ.16ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಿರೀಕ್ಷೆಗೂ ಮೀರಿ ಜನಸಾಗರ ಸಾಧ್ಯತೆ – ಕಾವು ಹೇಮನಾಥ ಶೆಟ್ಟಿ

    ಪುತ್ತೂರಿನಲ್ಲಿ ನ.16ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ನಿರೀಕ್ಷೆಗೂ ಮೀರಿ ಜನಸಾಗರ ಸಾಧ್ಯತೆ – ಕಾವು ಹೇಮನಾಥ ಶೆಟ್ಟಿ

    ಪುತ್ತೂರು-ಉಪ್ಪಿನಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಅನಧಿಕೃತ ಅಂಗಡಿಯನ್ನು ತೆರವು; ಬದಲಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಶಾಸಕ ಅಶೋಕ್ ರೈ

    ಪುತ್ತೂರು-ಉಪ್ಪಿನಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಅನಧಿಕೃತ ಅಂಗಡಿಯನ್ನು ತೆರವು; ಬದಲಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಶಾಸಕ ಅಶೋಕ್ ರೈ

    ಶ್ರೀನಿವಾಸ ಕಲ್ಯಾಣ,ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಪೂರ್ವಭಾವಿಯಾಗಿ ಸೀತಾ ಪರಿವಾರದ ಪ್ರಮುಖರ ಸಭೆ

    ಶ್ರೀನಿವಾಸ ಕಲ್ಯಾಣ,ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಪೂರ್ವಭಾವಿಯಾಗಿ ಸೀತಾ ಪರಿವಾರದ ಪ್ರಮುಖರ ಸಭೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

by ಪ್ರಜಾಧ್ವನಿ ನ್ಯೂಸ್
July 10, 2024
in ಈಶ್ವಮಂಗಲ, ಕುಂಬ್ರ, ಕೃಷಿ, ಪುತ್ತೂರು, ಪ್ರಾದೇಶಿಕ
0
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ
15
SHARES
44
VIEWS
ShareShareShare

ಕಾವು: ದ.ಕ ಜಿಲ್ಲೆಗೆ ಅಡಿಕೆಯೇ ಆಧಾರಸ್ತಂಭವಾಗಿದೆ, ಅಡಿಕೆ ಇಲ್ಲದಿದ್ರೆ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಲಿದೆ, ಪ್ರಸ್ತುತ ಅನೇಕ ಕಾರಣಗಳಿಂದ ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದಾರೆ ಹಾಗಾಗಿ ಅಡಿಕೆಯ ಬಗ್ಗೆ ಸಂಶೋಧನೆ ಮತ್ತು ಅಡಿಕೆಯ ಪರ್ಯಾಯ ಬಳಕೆಯಾದ್ರೆ ಮಾತ್ರ ಅಡಿಕೆಗೆ ಭವಿಷ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಜು.9ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ‘ಮಾಸ್’ ಇವರಿಂದ ಆರಂಭಗೊಂಡ ಅಡಿಕೆ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಅಡಿಕೆ ಕೃಷಿ ಉತ್ಪನ್ನವಾಗದೇ ಕಮರ್ಷಿಯಲ್ ಕ್ರಾಪ್ ಆಗಿ ವಿಭಾಗವಾಗಿರುವುದರಿಂದ ಅಡಿಕೆ ಹಳದಿ ರೋಗ ಇನ್ನಿತರ ಸಮಸ್ಯೆಗಳಿಗೆ ಸರಕಾರದಿಂದ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿರುವ 26 ಕಮರ್ಷಿಯಲ್ ಬೆಳೆಗಳನ್ನು ಕೃಷಿ ಉತ್ಪನ್ನವಾಗಿ ಪರಿವರ್ತಿಸುವಂತೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಿಕೆ ಕೃಷಿ ಉತ್ಪನ್ನವಾದಲ್ಲಿ ಸಾಕಷ್ಟು ಅನುದಾನ, ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಯವರು ಹೇಳಿದರು.

ನೆಟ್ಟಣದಲ್ಲಿರುವ ಸಿಪಿಸಿಆರ್‌ಐ ಅಡಿಕೆ ಮತ್ತು ತೆಂಗು ಸಂಶೋಧನೆಗೆಂದು ಇರುವ ಸಂಸ್ಥೆಯಾದ್ರೂ ಕೃಷಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲಿರುವ ವಿಜ್ಞಾನಿಗಳು ತಿಂಗಳಿಗೆ ೨ ಲಕ್ಷ ಸಂಬಳ ಪಡೆಯುವುದು ಮಾತ್ರವೇ ಹೊರತು ಏನೂ ಸಂಶೋಧನೆ ಮಾಡುತ್ತಿಲ್ಲ, ಹಾಗಾಗಿ ಅಡಿಕೆಗೆ ಒತ್ತುಕೊಟ್ರೆ ಮಾತ್ರ ನೆಟ್ಟಣದಲ್ಲಿರುವ ಜಾಗಕ್ಕೆ ರಿನಿವಲ್‌ಗೆ ಅವಕಾಶ ಕೊಡುತ್ತೇವೆ ಇಲ್ಲದಿದ್ರೆ ಆ ಜಾಗವನ್ನು ಕೃಷಿ ಇಲಾಖೆಗೆ ಕೊಡಿಸುತ್ತೇವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಮಾಸ್ ಅಧ್ಯಕ್ಷ ಸೀತಾರಾಮ ರೈ ಸವಣೂರುರವರು ಮಾತನಾಡಿ 1970ರಲ್ಲಿ ಅಡಿಕೆಗೆ ರೂ.3 ಆದಾಗ ವಾರಣಾಸಿ ಸುಬ್ರಾಯ ಭಟ್ಟರ ಮೂಲಕ ಕ್ಯಾಂಪ್ಕೋ ಆರಂಭಗೊಂಡಿತು, 2011ರಲ್ಲಿ ಮತ್ತೆ ಅಡಿಕೆ ಧಾರಣೆ ರೂ.30ಕ್ಕೆ ಕುಸಿದಾಗ ಮಾಸ್ ಸಂಸ್ಥೆ ಆರಂಭವಾಗಿ ಪ್ರಸ್ತುತ 9 ಖರೀದಿ ಕೇಂದ್ರಗಳ ಮೂಲಕ ವಾರ್ಷಿಕ ರೂ.167ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುತ್ತಿದೆ. ಬೈಕಂಪಾಡಿಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು ಒಟ್ಟು 48 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ, ಸುಳ್ಯದಲ್ಲಿ ಅಡಿಕೆ ಗಾರ್ಬಲಿಂಗ್ ತೆರೆಯಲು ಉದ್ದೇಶಿಸಿದ್ದು, ಕಡಬ-ಸುಳ್ಯದಲ್ಲಿ ಅಡಿಕೆ ಖರೀದಿ ಕೇಂದ್ರ ತೆರೆಯಲು ಬೇಡಿಕೆ ಬಂದಿದೆ. ಪರಿಷ್ಕರಿಸಿದ ಅಡಿಕೆಯನ್ನು ನೇರವಾಗಿ ಮಹಾರಾಷ್ಟ್ರ, ಗುಜರಾತ್‌ಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದರು.

ಮಾಸ್‌ನಲ್ಲಿ ಪ್ರಸ್ತುತ ಅಡಿಕೆ ಖರೀದಿ ದ್ವಿಗುಣಗೊಂಡಿದ್ದು, ಈ ಆರ್ಥಿಕ ವರ್ಷದ 3 ತಿಂಗಳಲ್ಲಿ ಈಗಾಗಲೇ 510 ಕ್ವಿಂಟಾಲ್ ಅಡಿಕೆ ಕಳೆದ ಬಾರಿಗಿಂತ ಜಾಸ್ತಿ ಖರೀದಿ ಆಗಿದೆ, ಸಂಸ್ಥೆಯ ಆರ್ಥಿಕ ಸದೃಢತೆ ಮತ್ತು ಹಣಕಾಸಿನ ಪೂರೈಕೆಗಾಗಿ ರಾಜ್ಯ ಸರಕಾರದಿಂದ 5 ಕೋಟಿ ರೂ. ಷೇರು ಬಂಡವಾಳ ಪಡೆದುಕೊಳ್ಳಲು ಶಾಸಕರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಸೀತಾರಾಮ ರೈ ಸವಣೂರುರವರು ಹೇಳಿದರು.

ಮಾರುಕಟ್ಟೆ ಬೆಳವಣಿಗೆಗೆ ಸ್ಪರ್ಧೆ ಅಗತ್ಯವಿದೆ, ಮುಂದಿನ ದಿನದಲ್ಲಿ ಪುತ್ತೂರು ಎಪಿಎಂಸಿಯಲ್ಲೂ ಮಾಸ್‌ನ ಅಡಿಕೆ ಗಾರ್ಬಲಿಂಗ್ ಆರಂಭವಾಗಿ ಕ್ಯಾಂಪ್ಕೋ ಮಾದರಿಯಲ್ಲಿ ಅಂತರ್‌ರಾಜ್ಯ ಸಂಸ್ಥೆಯಾಗಿ ಬೆಳೆಯಲಿ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ನಮ್ಮ ಸಂಘದಲ್ಲಿ 1990ರಲ್ಲಿ ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ಕೇಂದ್ರವನ್ನು ವಾರಣಾಸಿ ಸುಬ್ರಾಯ ಭಟ್‌ರವರು ಉದ್ಘಾಟಿಸಿ 2022ರವರೆಗೆ ಅಡಿಕೆ ಖರೀದಿ ನಡೆಯುತ್ತಿತ್ತು, 2022ರಲ್ಲಿ ಕ್ಯಾಂಪ್ಕೋದವರು ಕಾವುನಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆದ ಕಾರಣ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಕೇಂದ್ರ ನಿಂತಿತು, ಆದರೆ ನಮ್ಮ ಸಂಘದ ಸದಸ್ಯರು, ಗ್ರಾಹಕರು ನಮ್ಮ ಸಂಘದಲ್ಲೇ ಅಡಿಕೆ ಖರೀದಿ ಬೇಕೆಂದು ಬೇಡಿಕೆ ಇಟ್ಟ ಸಂದರ್ಭದಲ್ಲಿ ನಾವು ಮಾಸ್ ಸಂಸ್ಥೆಯವರಲ್ಲಿ ಮನವಿ ಮಾಡಿಕೊಂಡಿದ್ದೆವು, ಸೀತಾರಾಮ ರೈಯವರು ಅಧ್ಯಕ್ಷರಾದ ಬಳಿಕ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿ ಇದೀಗ ಮತ್ತೆ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಉದ್ಘಾಟನೆಗೊಂಡಿದೆ, ಹಾಗಾಗಿ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಪ್ರಥಮ ಗ್ರಾಹಕರಾಗಿ ಅಡಿಕೆ ಮಾರಾಟ ಮಾಡಿದ ಶ್ರೀಪತಿ ಮೂಡೆತ್ತಾಯ ನನ್ಯ, ವೆಂಕಟಕೃಷ್ಣ ಭಟ್ ಮಳಿ, ಸತ್ಯನಾರಾಯಣ ಕಡಂಬಳಿಕೆಯವರಿಗೆ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾರಾಟ ಬಿಲ್ ವಿತರಣೆ ಮಾಡಿದರು.

ಮಾಸ್‌ನ ನಿರ್ದೇಶಕರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬೆಳ್ಳೆ ಶಿವಾಜಿ ಸುವರ್ಣ, ಸುಧಾ ಎಸ್ ರೈ, ಪುಷ್ಪರಾಜ ಅಡ್ಯಂತಾಯ, ಸಿಇಓ ಟಿ ಮಹಾಬಲೇಶ್ವರ ಭಟ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

HPR Institute Of Nursing And Paramedical Sciences & Friends Beke

ಜಾಹೀರಾತು

ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಕಾವು ಪಿಎಸಿಎಸ್‌ನ ಸಿಇಓ ಕೇಶವಮೂರ್ತಿ ಪಿ.ಜಿ. ವಂದಿಸಿದರು. ಸವಣೂರು ಪಿಎಸಿಎಸ್‌ನ ಸಿಇಓ ಚಂದ್ರಶೇಖರ್ ಮತ್ತು ಕಾವು ಪಿಎಸಿಎಸ್‌ನ ಸಿಬ್ಬಂದಿ ಸುನೀಲ್ ನಿದಿಮುಂಡರವರು ಕಾರ್ಯಕ್ರಮ ನಿರ್ವಹಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಪ್ರವೀಣ್ ರೈ ಮೇನಾಲ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಶ್ರೀಧರ್ ರಾವ್ ನಿದಿಮುಂಡ, ಶಿವಪ್ರಸಾದ್ ಕೊಚ್ಚಿ, ಲೋಹಿತ್ ಅಮ್ಚಿನಡ್ಕ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತ್ತಡ್ಕರವರು ಅತಿಥಿಗಳನ್ನು ಗೌರವಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಉದ್ಘಾಟನಾ ದಿನದಂದೇ ಅಡಿಕೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಉದ್ಘಾಟನಾ ದಿನದ ಸಲುವಾಗಿ ಪ್ರತಿ ಕೆ.ಜಿ ಅಡಿಕೆಗೆ ರೂ.2 ಹೆಚ್ಚಳ ದರ ನೀಡಲಾಗಿತ್ತು, ಪ್ರಥಮ ದಿನದಂದು 76 ಗ್ರಾಹಕರಿಂದ ಸುಮಾರು 5.3 ಟನ್‌ನಷ್ಟು ಅಡಿಕೆ ಖರೀದಿ ಆಗಿದೆ, ಹೊಸ ಅಡಿಕೆ ರೂ.387, ಹಳೆ ಅಡಿಕೆ ರೂ.465ಕ್ಕೆ ಖರೀದಿ ಆಗಿದೆ ಎಂದು ಮಾಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ ಲೋಕೇಶ್‌ರವರು ಮಾಹಿತಿ ನೀಡಿದ್ದಾರೆ.

SendShare6Share
Previous Post

ಪುತ್ತೂರು: ನಿಪ್ಪಾನ್ ಪೈಂಟ್ಸ್‌ನ ಮಳಿಗೆ ಗಜಾನನ ಟ್ರೆಡರ್ಸ್ ಸ್ಥಳಾಂತರಗೊಂಡು ಶುಭಾರಂಭ

Next Post

ಮಂಗಳೂರು: ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರರಿಸ್ಟ. ಹಾಗಾದರೆ ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ: ಮಂಜುನಾಥ್ ಭಂಡಾರಿ ಪ್ರಶ್ನೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮಂಗಳೂರು: ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರರಿಸ್ಟ. ಹಾಗಾದರೆ ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ: ಮಂಜುನಾಥ್ ಭಂಡಾರಿ ಪ್ರಶ್ನೆ

ಮಂಗಳೂರು: ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರರಿಸ್ಟ. ಹಾಗಾದರೆ ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ: ಮಂಜುನಾಥ್ ಭಂಡಾರಿ ಪ್ರಶ್ನೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..