ವಿಟ್ಲ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಕೆಜೆ ಟವರ್ಸ್ ಅಲ್ಲಿ HVK ಎಂಟರ್ಪ್ರೈಸಸ್ ಎಂಬ ಟ್ರಾವೆಲಿಂಗ್ ಹಾಗೂ rto ಸೇವಾ ಕೇಂದ್ರವು ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಪುತ್ತೂರು ಗ್ರಾಮಾಂತರ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ನಗರ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಉದ್ಯಮಿ ಅಬ್ದುಲ್ ರಹಿಮಾನ್, ಪುತ್ತೂರು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಿವಾಸ ಶೆಟ್ಟಿ, ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಅನಂತ ಪ್ರಸಾದ್, ಜಯರಾಮ ಆಳ್ವ, ಹರೀಶ್ ಮರುವಾಳ, ಜೂಮ್ಇನ್ ಟಿವಿಯ ಶ್ರೇಯಸ್, ಪ್ರಜಾಧ್ವನಿ ನ್ಯೂಸ್ ನ ಮನ್ಮಥ ಶೆಟ್ಟಿ ಪುತ್ತೂರು, ಪತ್ರಕರ್ತ ವಿಟಿ ಪ್ರಸಾದ್, ಉದಯ್ ಆಲಂಗಾರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ರಾಜೇಶ್ ಕರವೀರ, ಶರತ್ ಎನ್ಎಸ್, ಇಶಾಮ್ ಕಲ್ಲಂಗಳ ಅತಿಥಿಗಳನ್ನು ಗೌರವಿಸಿದರು. ರವಿಶಂಕರ್ ವಿಟ್ಲ ಕಾರ್ಯಕ್ರಮವನ್ನು ನಿರ್ವಹಿಸಿದರು.