• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕುಂಭಮೇಳದ ಪ್ರಮುಖ ಆಕರ್ಷಣೆ ಅಘೋರಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕುಂಭಮೇಳದ ಪ್ರಮುಖ ಆಕರ್ಷಣೆ ಅಘೋರಿಗಳ ಬಗ್ಗೆ ನಿಮಗೆಷ್ಟು ಗೊತ್ತು?

October 29, 2024
ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

May 7, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

April 30, 2026
ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

April 30, 2026
ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

April 29, 2026
ಬೆಂಗಳೂರುನಲ್ಲಿ ಮಳೆಗೆ ಆಸ್ಪತ್ರೆ ಕಾಂಪೌಂಡ್ ಕುಸಿದು ಮಕ್ಕಳು ಸೇರಿ 8 ಮಂದಿ ಸಾವು

ಬೆಂಗಳೂರುನಲ್ಲಿ ಮಳೆಗೆ ಆಸ್ಪತ್ರೆ ಕಾಂಪೌಂಡ್ ಕುಸಿದು ಮಕ್ಕಳು ಸೇರಿ 8 ಮಂದಿ ಸಾವು

April 29, 2026
ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

April 30, 2026
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

April 29, 2026
ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

April 29, 2026
ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

April 30, 2026
ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ  ಶ್ರೀ  ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

April 10, 2026
ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

April 10, 2026
ಪ್ರತಿಭಾವಂತ ಫೋಟೋಗ್ರಾಫರ್ ನೇಣು ಬಿಗಿದು ಆತ್ಮಹತ್ಯೆ..!

ಪ್ರತಿಭಾವಂತ ಫೋಟೋಗ್ರಾಫರ್ ನೇಣು ಬಿಗಿದು ಆತ್ಮಹತ್ಯೆ..!

April 6, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, May 8, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

    ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

    ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

    ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

    ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

    ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

    ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

    ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

    ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

    ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

    ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ  ಶ್ರೀ  ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

    ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಧಾರ್ಮಿಕ

ಕುಂಭಮೇಳದ ಪ್ರಮುಖ ಆಕರ್ಷಣೆ ಅಘೋರಿಗಳ ಬಗ್ಗೆ ನಿಮಗೆಷ್ಟು ಗೊತ್ತು?

by ಪ್ರಜಾಧ್ವನಿ ನ್ಯೂಸ್
October 29, 2024
in ಧಾರ್ಮಿಕ, ರಾಷ್ಟ್ರೀಯ, ಸಾಂಸ್ಕೃತಿಕ
0
ಕುಂಭಮೇಳದ ಪ್ರಮುಖ ಆಕರ್ಷಣೆ ಅಘೋರಿಗಳ ಬಗ್ಗೆ ನಿಮಗೆಷ್ಟು ಗೊತ್ತು?
84
SHARES
239
VIEWS
ShareShareShare

ಹಿಂದೂ ಸಂಸ್ಕೃತಿಯಲ್ಲಿ ಕುಂಭಮೇಳಕ್ಕೆ ವಿಶೇಷ ಸ್ಥಾನ. ಮಕರ ಸಂಕ್ರಾಂತಿಯಂದು ನಡೆಯುವ ಈ ಮೇಳಕ್ಕೆ ತಿಂಗಳ ಮುನ್ನವೇ ದೇಶ ಭರ್ಜರಿ ತಯಾರಿ ನಡೆಯುತ್ತದೆ. ಪ್ರಯಾಗ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನಿಗಳಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ. ಈ ಕುಂಭಮೇಳದ ಪ್ರಮುಖ ಆಕರ್ಷಣೆ ಎಂದರೆ ಅಘೋರಿಗಳು ಇವರನ್ನ ಸಿದ್ದಿ ಪುರುಷರು ಎಂದು ಕರೆಯುತ್ತಾರೆ ಹಾಗಾದ್ರೆ ಈ ಅಗೋರಿಗಳೆಂದರೆ ಯಾರು ಅವರು ಯಾಕೆ ಹೇಗೆ ಅಗೋರಿಗಳಾದರೂ ಅವರ ಶಕ್ತಿಯಾದರೂ ಏನು ಅನ್ನೋದರ ಕುರಿತು ಕೂಲಂಕುಶವಾಗಿ ನೋಡ್ಕೊಂಡ್ ಬರೋಣ.

ನಮ್ಮ ಹಿಂದೂ ಪರಂಪರೆಯಲ್ಲಿ ಅದೆಷ್ಟೋ ರೀತಿಯಾದ ಸಾಧು ಸಂತರು ಸಿದ್ಧಿ ಪುರುಷ ಇದ್ದಾರೆ ಹಾಗೂ ಅವರಲೆಲ್ಲರಲ್ಲಿ ವಿಭಿನ್ನವಾದ ವಿಶಿಷ್ಟವಾದ ಕಲೆ ಮತ್ತು ಆಚಾರ ಗಳು ಇವೆ ಆದರೆ ರೀತಿ ಅಗೋರಿ ಪಂಕ್ತವು ಸಹಾ ತನ್ನದೇ ಆದ ಛಾಪನ್ನು ಮೂಡಿಸಿದೆ ಹಾಗಾಗಿ ಈ ಆಗೊರಿ ಅಂದರೆ ಯಾರು ಅವರು ಹೇಗಿರುತ್ತಾರೆ ಮತ್ತು ಅವರ ಜೀವನ ಶೈಲಿ ಹೇಗಿರುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಅಗೋರಿಗಳು ಶಿವನ ಅಪ್ರತಿಮ ಭಕ್ತರಾಗಿದ್ದು ಆತ್ಮವನ್ನು ಗೆದ್ದು ಪರಮಾತ್ಮನನ್ನು ಕಾಣುತ್ತಾರೆ ಎಂದು ನಂಬುವರು ಅದರಂತೆ ಇವರು ಮನುಷ್ಯನ ದೇಹಕ್ಕೆ ಯಾವುದೇ ರೀತಿಯಾದ ಮಾನ್ಯತೆ ಕೊಡುವುದಿಲ್ಲ ಆತ್ಮದ ಸರ್ವ ಶ್ರೇಷ್ಟ ಹೀಗಾಗಿ ಆತ್ಮವನ್ನು ಅರಿತವನು ಪರಮಾತ್ಮನನ್ನು ಸೇರುತ್ತಾರೆ ಎಂದು ಹೇಳುತ್ತಾರೆ.

Poorna squash

ಜಾಹೀರಾತು

ಇವರು ಸೆಣಬಿನ ತುಂಡನ್ನು ಬಟ್ಟೆಯನ್ನಾಗಿ ಹಾಕಿಕೊಳ್ಳುತ್ತಾರೆ ಇಲ್ಲವೇ ಬೆತ್ತ ಲೆಯಾಗಿ ಇರುತ್ತಾರೆ ಅಲೌಕಿಕ ಸುಖವನ್ನು ತ್ಯಜಿಸಿ ಪಂಚೇಂದ್ರಿಯಗಳ ಹಿಡಿತವನ್ನು ಸಾಧಿಸಲು ಈ ರೀತಿ ಬೆತ್ತ ಲೆಯಾಗಿ ಇರುತ್ತಾರೆ ಮತ್ತು ಇವರು ಹೆಚ್ಚಾಗಿ ಜನ ಸಮೂಹ ಇರುವ ಜಾಗದಲ್ಲಿ ಇರಲು ಇಷ್ಟ ಪಡುವುದಿಲ್ಲ ಅದರ ಬದಲಾಗಿ ಸ್ಮಶಾ ನದಲ್ಲಿ ಇರಲು ಹೆಚ್ಚು ಇಷ್ಟ ಪಡುತ್ತಾರೆ ಇನ್ನು ಇವರ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಇವರು ಯಾವುದಕ್ಕೂ ಕೂಡ ಅಸಹ್ಯ ಪಡುವುದಿಲ್ಲ ಸ್ಮಶಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಇರುವ ಹೆಣ ಗಳನ್ನು ಬಗೆದು ತಿನ್ನುತ್ತಾರೆ ಮತ್ತು ಕಸ ಕಡ್ಡಿ ಕೊಳೆತ ಹಣ್ಣು ಹಂಪಲು ಪ್ರಾಣಿಗಳ ಮಲಮೂತ್ರ ಸೇವನೆ ಮಾಡುತ್ತಾರೆ. ಇವರು ಮನುಷ್ಯನಿಂದ ದುಡ್ಡು ಬಯಸುವುದಿಲ್ಲ ಹೆಚ್ಚು ಅಂದರೆ ಅವರಿಗೆ ಪ್ರಿಯವಾದ ಗಾಂ ಜಾ ಬಯಸುತ್ತಾರೆ.

ಇವರು ಶಿವ ಮತ್ತು ಶಕ್ತಿಯ ಆರಾಧಕ ಆಗಿದ್ದು ಸ್ಮಶಾನದಲ್ಲಿ ಹೆಣ ಗಳನ್ನು ಸುಟ್ಟಾಗ ಸಿಗುವ ಬೂದಿಯನ್ನು ಮೈ ತುಂಬಾ ಬಳೆದು ಕೊಳ್ಳುತ್ತಾರೆ ಹಾಗೂ ಇದನ್ನು ಚಿತಾ ಭಸ್ಮ ಎಂದು ಸಹಾ ಕರೆಯುತ್ತಾರೆ ಹಾಗೂ ಇದನ್ನು ಪ್ರತಿಯೊಬ್ಬ ಆಗೊರಿಯು ಸಹಾ ತನ್ನ ಮೈಗೇ ಹಚ್ಚಿಕೊಂಡು ಇರುತ್ತಾನೆ ಹಾಗೂ ಆಗೊರಿಗಳಲ್ಲಿ ಸಹಾ ಗುರುಗಳು ಇರುತ್ತಾರೆ ಮತ್ತು ಈ ಗುರುಗಳು ತನ್ನ ಶಿಷ್ಯರಿಗೆ ಅನೇಕ ರೀತಿಯಾದ ಪರೀಕ್ಷೆ ಮಾಡುತ್ತಾರೆ ಆನಂತರ ಆಗೋರಿ ದೀಕ್ಷೆಯನ್ನು ಕೊಡಲಾಗುತ್ತದೆ ಈ ಅಗೊರಿಗಳು ಹೆಚ್ಚಾಗಿ ಕಾಶಿ ಕೇದಾರನಾಥ್ ಪಶುಪತಿನಾಥ ಹೀಗೆ ಶಿವನ ದೇವಸ್ಥಾನದ ಸುತ್ತ ಹೆಚ್ಚಾಗಿ ಕಾಣಿಸುತ್ತಾರೆ. ಹಾಗಾಗಿ ವಾಮಾ ಚಾರ ಮಾಟ ಮಂತ್ರಗಳನ್ನು ಮಾಡುತ್ತಾರೆ ಎಂದು ಕೆಲವರು ತಪ್ಪಾಗಿ ತಿಳಿಯುತ್ತಾರೆ ಆದರೆ ಇವರು ಹಠ ಯೋಗದ ಪರಿಣತರು ಯೋಗಾಸನ ದಿಂದ ಕೆಲವು ವಿಶೇಷ ಶಕ್ತಿ ಪಡೆದಿರುತ್ತಾರೆ ಹಾಗೂ ಇವರಿಗೆ ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿಯು ಸಹಾ ಈ ಯೋಗಾಸನ ದಿಂದ ಬಂದಿರುತ್ತದೆ ಮತ್ತು ಇವರು ಪ್ರಚಾರ ಹಾಗೂ ಪ್ರಚೋದನೆ ಮಾಡುವುದಿಲ್ಲ.

ಅಘೋರಿಗಳ ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು

ಭಾರತ ಮೂಲತಃ ಸಾಧು, ಸಂತರ ಮತ್ತು ಆಧ್ಯಾತ್ಮದ ತವರೂರು. ಇದರಲ್ಲಿ ಸಾಧುಗಳ ವಿಚಾರಕ್ಕೆ ಬರುವುದಾದರೆ, ನಾವು ಇಲ್ಲಿ ಹಲವಾರು ಬಗೆಯ ಸಾಧುಗಳನ್ನು ಕಾಣಬಹುದು. ಅವರಲ್ಲಿ ಕೆಲವರು ಖಾವಿ ಬಟ್ಟೆಯನ್ನು ಧರಿಸಿದರೆ, ಇನ್ನೂ ಕೆಲವರು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ. ಇನ್ನು ಕೆಲವು ಸಾಧುಗಳು ಬಟ್ಟೆಯನ್ನೆ ಧರಿಸದೆಯೇ ತಿರುಗಾಡುತ್ತಾರೆ. ಸಾಧುಗಳು ಎಂದರೆ ನಮ್ಮ ಮನಸ್ಸಿನಲ್ಲಿ ತಮ್ಮ ಜೀವನವನ್ನು ದೇವರಿಗಾಗಿ ಸಮರ್ಪಿಸಿದ, ಐಹಿಕ ಸುಖ ಭೋಗಗಳನ್ನು ತ್ಯಾಗ ಮಾಡಿ, ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಜೀವಿಸುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆದರೆ ತಮ್ಮದೇ ಆದ ಅಸಂಪ್ರದಾಯಿಕವಾದ ವಿಧಾನಗಳ ಮೂಲಕ ದೇವರನ್ನು ಒಲಿಸಿಕೊಳ್ಳಲು ಶ್ರಮಿಸುವ ಕೆಲವು ಸಾಧುಗಳು ಇರುವರೆಂದು ನಿಮಗೆ ಗೊತ್ತೇ? ಈ ಸಾಧುಗಳು ಇತರರು ಭಯಾನಕವೆಂದು ಪರಿಗಣಿಸುವ ಸ್ಥಳಗಳಲ್ಲಿ ವಾಸಿಸುತ್ತಾರೆ.

Keshari Durga

ಜಾಹೀರಾತು

ಸ್ಮಶಾನಗಳು ಇವರು ವಾಸಿಸುವ ಸ್ಥಳಗಳಲ್ಲಿ ಒಂದಾಗಿದೆ. ಇವರು ಸ್ಮಶಾನದ ಬೂದಿಯನ್ನು ತಮ್ಮ ಮೈಗೆಲ್ಲ ಬಳಿದುಕೊಳ್ಳುತ್ತಾರೆ. ಇದಲ್ಲದೆ ಮನುಷ್ಯನ ತಲೆ ಬುರುಡೆಯನ್ನು ಇವರು ಬಟ್ಟಲಿನಂತೆ ಬಳಸುತ್ತಾರೆ. ಇದನ್ನು ಇವರು ಕುಡಿಯುವ ಸಲುವಾಗಿ ಬಳಸುತ್ತಾರೆ. ಜೊತೆಗೆ ಇವರು ಮನುಷ್ಯನ ಮಾಂಸವನ್ನು ಸಹ ತಿನ್ನುತ್ತಾರೆ. ಹಿಂದೂ ಸಂಪ್ರದಾಯಗಳ ಹಿಂದೆ ಇರುವ ಅದ್ಭುತವಾದ ವೈಜ್ಞಾನಿಕ ಕಾರಣಗಳು ಈಗ ನಿಮಗೆ ಹೊಳೆದಿರಬೇಕು! ನಾವು ಯಾರ ಬಗ್ಗೆ ಇಲ್ಲಿ ಹೇಳಲು ಹೋಗುತ್ತಿದ್ದೇವೆ ಎಂದು! ಹೌದು, ನಾವು ಭಾರತದಲ್ಲಿನ ಅಘೋರಿಗಳ ಕುರಿತಾಗಿ ಹೇಳುತ್ತಿದ್ದೇವೆ.

ಅಘೋರಿಗಳು ತಮ್ಮ ನರಭಕ್ಷಕ ಆಚರಣೆಗಳಿಂದ. ಪ್ರಾಣಿ ಬಲಿ ಮತ್ತು ಇನ್ನಿತರ ವಿಲಕ್ಷಣ ಸಂಗತಿಗಳಿಂದ ನಮಗೆ ಚಿರಪರಿಚಿತರಾಗಿದ್ದಾರೆ. ಇವರು ಶಿವನ ಬೈರವ ಅವತಾರದ ಪರಮಭಕ್ತರು. ಇವರ ಗುರಿ ಪುನರ್ಜನ್ಮದಿಂದ ಮುಕ್ತಿಯನ್ನು ಹೊಂದುವುದು. ಹಾಗಾಗಿ ಇವರುಗಳು ಪ್ರಙ್ಞೆಗೆ ಅತೀತವಾದ ಸ್ಥಿತಿಯಲ್ಲಿ ತಮ್ಮ ಜೀವನವನ್ನು ದೂಡುತ್ತಿರುತ್ತಾರೆ ಮತ್ತು ಸಾಮಾಜಿಕ ನಿಷೇಧಗಳ ಮೂಲಕ ಆತ್ಮಸಾಕ್ಷಾತ್ಕಾರವನ್ನು ಸಾಧಿಸಿ “ಮೋಕ್ಷ”ವನ್ನು ಪಡೆಯಲು ಬಯಸುತ್ತಾರೆ. ಅಂತಿಮವಾಗಿ ಇವರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಅಲ್ಲ (ಅದ್ವೈತ) ಎಂಬುದನ್ನು ಸಾರುವ ಅಂತಿಮ ಸತ್ಯವನ್ನು ತಿಳಿಯಲು ಬಯಸುತ್ತಾರೆ. ಅಘೋರಿಗಳು ಶಿವನೇತ್ರರಂತೆ ಶಿವನ ಭಕ್ತರಾಗಿದ್ದರು, ಅವರಂತಲ್ಲದೆ ಅತಿಯಾದ ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶಿವನೇತ್ರರು ಸಹ ಶಿವನನ್ನು ಆರಾಧಿಸುತ್ತಾರೆ. ಆದರೆ ಅವರು ಅದಕ್ಕೆ ಅನುಸರಿಸುವುದು ಸಾತ್ವಿಕ ಮಾರ್ಗವನ್ನು. “ಅಘೋರಿ” ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದಾಗಿದೆ. ಇದರರ್ಥ ಅಂಧಕಾರ ರಹಿತ ಎಂದು. ಅಘೋರ್ ಎಂಬುದು ನಿರ್ಭಯದಿಂದ ಕೂಡಿದ ಅಥವಾ ಅಸಹ್ಯ ರಹಿತವಾದ ಸ್ವಾಭಾವಿಕ ಪ್ರಙ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೆ ಅಘೋರಿಗಳು ಭಯವಿಲ್ಲದೆ ಬದುಕುವವರು ಮತ್ತು ಯಾವುದೇ ತಾರತಾಮ್ಯವನ್ನು ಹೊಂದಿಲ್ಲದೆ ಬದುಕುವವರಾಗಿರುತ್ತಾರೆ.

Muliya

ಜಾಹೀರಾತು

ಹಾಗಾದರೆ ಬನ್ನಿ ನಾವು ಈ ಅಘೋರಿಗಳ ಬಗ್ಗೆ, ಅವರ ಜೀವನ ಹಾಗು ಆಚರಣೆಗಳ ಕುರಿತಾಗಿ ಮತ್ತು ನಂಬಿಕೆಗಳ ಬಗ್ಗೆ ಸ್ವಲ್ಪ ಆಳವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಭಾರತದಲ್ಲಿರುವ 10 ಪ್ರಮುಖ ಮೂಢನಂಬಿಕೆಗಳು ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು ಅಘೋರಿಗಳು ಈ ವಿಶ್ವದಲ್ಲಿ ಯಾವುದು ಅಶುದ್ಧವಲ್ಲ ಎಂಬ ವಿಚಾರವನ್ನು ನಂಬುತ್ತಾರೆ. ಏಕೆಂದರೆ ಪ್ರತಿಯೊಂದು ಶಿವನಿಂದ ಬಂದದ್ದು ಮತ್ತು ಶಿವನ ಬಳಿಗೆ ವಾಪಸ್ ಹೋಗುವುವು. ಹಾಗಾಗಿ ವಿಶ್ವದಲ್ಲಿರುವ ಪ್ರತಿಯೊಂದು ಅಂಶವು ಸಹ ಪರಿಶುದ್ಧತೆಯಿಂದ ಕೂಡಿವೆ ಎಂದು ನಂಬುತ್ತಾರೆ. ಲಯಕಾರಕನಾದ ಶಿವನು ಸ್ಮಶಾನವಾಸಿ. ಆದ್ದರಿಂದ ಅಘೋರಿಗಳು ಸಹ ಸ್ಮಶಾನದ ಸಮೀಪದಲ್ಲಿಯೇ ವಾಸಿಸುತ್ತಾರೆ. ಇವರು ತಮ್ಮ ದೇಹಕ್ಕೆ ಚಿತಾಭಸ್ಮವನ್ನು ಲೇಪಿಸಿಕೊಳ್ಳುತ್ತಾರೆ. ಏಕೆಂದರೆ ಅವರ ಪ್ರಕಾರ ಇದು ಭೂಮಿಯ ಮೇಲಿರುವ ಅಂಶಗಳಲ್ಲಿಯೇ ಅತ್ಯಂತ ಪರಿಶುದ್ಧವಾದ ಅಂಶವಂತೆ. ಜೊತೆಗೆ ಇದು ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ ಹಾಗು ಒಂದಲ್ಲ ಒಂದು ದಿನ ಎಲ್ಲವೂ ಬೂದಿಯಾಗುತ್ತವೆ ಎಂಬ ಅಂಶವನ್ನು ಸದಾ ನೆನಪಿಗೆ ತರುತ್ತದೆಯಂತೆ. ಅಸಂಪ್ರಾದಾಯಿಕ ಮತ್ತು ಭಯಾನಕ ಆಚರಣೆಗಳು ಅಘೋರಿಗಳು ಸತ್ತ ಮನುಷ್ಯನ ಮೂಳೆಗಳನ್ನು ಮತ್ತು ತಲೆ ಬುರುಡೆಗಳನ್ನು ತಮ್ಮ ಆಭರಣಗಳಾಗಿ ಹಾಗು ತಿನ್ನುವ ಬಟ್ಟಲುಗಳಾಗಿ ಬಳಸುತ್ತಾರೆ. ಇವುಗಳನ್ನು ಇವರು ಅಂತ್ಯ ಸಂಸ್ಕಾರದ ನಂತರ ಗಂಗಾ ನದಿಯಲ್ಲಿ ಎಸೆಯುವ ಶವಗಳಿಂದ ಸಂಗ್ರಹಿಸುತ್ತಾರೆ.

ಹಿಂದೂ ಆಚಾರದ ಪ್ರಕಾರ ಸಿದ್ಧ ಪುರುಷರ, ಗರ್ಭಿಣಿಯರ, ಹಾವು ಕಡಿತಕ್ಕೆ ಒಳಗಾದವರನ್ನು ಮತ್ತು ಆಗ ತಾನೇ ಜನಿಸಿದ ಮಕ್ಕಳನ್ನು ದಹನ ಮಾಡಬಾರದಂತೆ. ಹಾಗಾಗಿ ಅಂತಹವರನ್ನು ಪವಿತ್ರ ಗಂಗಾನದಿಯಲ್ಲಿ ತೇಲಿ ಬಿಡಲಾಗುತ್ತದೆ. ಇಂತಹ ಶವಗಳನ್ನು ಅಘೋರಿಗಳು ತಮ್ಮ ಬಲಿಪೀಠ ಅಥವಾ ಪೂಜಾ ಸ್ಥಳಗಳಾಗಿ ಮತ್ತು ಕೆಲವೊಮ್ಮೆ ಮರಣದ ನೆನಪಿಗಾಗಿ ಇವುಗಳ ಭಕ್ಷಣೆಯು ಸಹ ನಡೆಯುತ್ತದೆ. ಅಘೋರಿಗಳ ಪ್ರಕಾರ ಶಿವನ ಬೈರವ ಅವತಾರವು ಶ್ರೇಷ್ಠಾತಿ ಶ್ರೇಷ್ಠ ದೈವವೆಂದು ಪರಿಗಣಿಸಲ್ಪಟ್ಟಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಸಂಗತಿ, ಅವುಗಳ ಪರಿಣಾಮ ಮತ್ತು ಸ್ಥಿತಿಗಳಿಗೆ ಶಿವನೇ ಕಾರಣ. ಅಘೋರಿಗಳ ಪ್ರಕಾರ ಪ್ರತಿಯೊಂದು ಆತ್ಮವು ಶಿವನಂತೆ. ಇದು ಅಷ್ಟ ಮಹಾಪಾಶಗಳೆಂದು ಕರೆಯುವ 8 ಐಹಿಕ ಬಂಧನಗಳಿಂದ ಆವರಿಸಲ್ಪಟ್ಟಿದೆ. ಆ ಎಂಟು ಮಹಾಪಾಶಗಳು ಹೀಗಿವೆ. ಈ ಎಂಟು ಬಂಧನಗಳು ಇಂದ್ರಿಯ ಆಸೆ,ಕೋಪ, ಲೋಭ, ದುರಾಸೆ, ಭಯ ಮತ್ತು ದ್ವೇಷಗಳು ಆಗಿವೆ. ಅಘೋರಿಗಳ ಎಲ್ಲಾ ಸಾಧನಗಳು ಮತ್ತು ಆಚರಣೆಗಳು ಈ ಬಂಧನಗಳಿಂದ ವಿಮುಕ್ತಿಯನ್ನು ಪಡೆಯುವ ಕಡೆಗೆ ಸಾಗುತ್ತವೆ. ನಂಬಿಕೆಗಳು ಅಘೋರಿಗಳ ಪ್ರತಿಯೊಂದು ಆಚರಣೆಗಳು ಅವರನ್ನು ಮನುಷ್ಯ ಜೀವನದ ಅಷ್ಟ ಮಹಾಪಾಶಗಳಿಂದ ಬಂಧ ಮುಕ್ತಗೊಳಿಸಿ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ನೆರವಾಗುತ್ತವೆ.

ashwinistudioputtur

ಜಾಹೀರಾತು

ಸ್ಮಶಾನದಲ್ಲಿ ಇವರು ಮಾಡುವ ಸಾಧನೆಯು ಇವರನ್ನು ಸಾವಿನ ಕುರಿತಾಗಿ ಇರುವ ಭಯದಿಂದ ಮುಕ್ತಿಗೊಳಿಸುತ್ತದೆ. ಕೆಲವೊಮ್ಮೆ ಇವರು ಶವಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಸಹ ತೊಡಗಿಕೊಳ್ಳುತ್ತಾರೆ. ಇದರಿಂದ ಅವರಿಗೆ ಲೈಂಗಿಕ ಬಯಕೆಗಳು ಬಿಡುಗಡೆ ಹೊಂದುತ್ತವೆ ಹಾಗು ಅವರ ಇಂದ್ರಿಯ ಆಸೆಗಳು ಅವರಿಂದ ದೂರ ಸರಿಯುತ್ತವೆ. ನಗ್ನವಾಗಿ ಸಂಚರಿಸುವ ಇವರಿಗೆ ಜೀವನದಲ್ಲಿ ಅಗತ್ಯ ಅಂಶಗಳ ಹೊರತಾಗಿ ಯಾವುದೇ ದುರಾಸೆಯಿರುವುದಿಲ್ಲ. ಅಘೋರಿಗಳು ಯಾವುದೇ ಆತ್ಮವು ಈ ಎಂಟು ಬಂಧನಗಳಿಂದ ಬಿಡುಗಡೆ ಹೊಂದಿದ ಮೇಲೆ ಆಕೆ/ಆತನು ಸದಾಶಿವನ ಸಾನಿಧ್ಯದಲ್ಲಿ ಮೋಕ್ಷವನ್ನು ಸಂಪಾದಿಸುತ್ತಾರಂತೆ. ವಾಮಾಚಾರ ಅಘೋರಿಗಳ ವಿಲಕ್ಷಣವಾದ ನಡವಳಿಕೆಯನ್ನು ಗಮನಿಸಿ ಜನ ಅವರನ್ನು ಮಂತ್ರವಾದಿಗಳು, ವಾಮಾಚಾರ ಮಾಡುವವರು ಎಂದು ತಪ್ಪಾಗಿ ಗ್ರಹಿಸುತ್ತಾರೆ.

Fashion street 9902633624

ಜಾಹೀರಾತು

ಆದರೆ ಇದು ಸತ್ಯವಲ್ಲ. ನಿರಂತರವಾದ ಯೋಗ ಸಾಧನೆಯಿಂದ ಅವರಿಗೆ ಕೆಲವೊಂದು ಅಲೌಕಿಕ ಶಕ್ತಿಗಳು ಲಭಿಸಿರುವುದು ನಿಜವಾದರು, ಅವರು ಯಾವುದೇ ವಾಮಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ಅವರ ಆಚರಣೆಗಳು ಮತ್ತು ವಿಧಿ ವಿಧಾನಗಳು ಕೇವಲ ಶಿವನ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಮತ್ತು ಮೋಕ್ಷವನ್ನು ಪಡೆಯುವ ಸಲುವಾಗಿ ಸಮರ್ಪಣೆಯಾಗುತ್ತವೆ. ಅಘೋರಿಗಳನ್ನು ಯಾರನ್ನು ಪೂಜಿಸುತ್ತಾರೆ? ಅಘೋರಿಗಳು ಶಿವ ಮತ್ತು ಕಾಳಿಯನ್ನು ಪೂಜಿಸುತ್ತಾರೆ. ಅಘೋರಿಗಳಿಗೆ ಅಲೌಕಿಕ ಶಕ್ತಿಗಳಂತಹ ದಶ ಮಹಾವಿದ್ಯೆಗಳನ್ನು ದಯಪಾಲಿಸುವವಳು ಕಾಳಿ ಅಥವಾ ತಾರಾ. ಹಾಗಾಗಿ ಈಕೆಯನ್ನು ಇವರು ಪೂಜಿಸುತ್ತಾರೆ.

ಇವರು ಕಾಳಿಯನ್ನು ಧೂಮವತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಭಾಗಲಮುಖಿ ಮತ್ತು ಬೈರವಿ ಎಂಬ ಹೆಸರಿನಿಂದಲೂ ಇವರು ಈ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ ಇವರು ಶಿವನನ್ನು ಆತನ ರುದ್ರ ಸ್ವರೂಪವಾದ ಮಹಾಕಾಳ, ಬೈರವ ಮತ್ತು ವೀರಭದ್ರ ಎಂಬ ಅವತಾರ ರೂಪಗಳಲ್ಲಿ ಆರಾಧಿಸುತ್ತಾರೆ. ಹಿಂಗ್ಲಾಜ್ ಮಾತಾ ಅಘೋರಿಗಳ ಕುಲ ದೇವತೆಯಾಗಿ ಪೂಜಿಸಲ್ಪಡುತ್ತಾಳೆ. ಸರಳ ತತ್ವಙ್ಞಾನ ಅಘೋರಿಗಳ ಪ್ರಕಾರ ಇಡೀ ಬ್ರಹ್ಮಾಂಡವೇ ಅವರಲ್ಲಿ ಅಡಕಗೊಂಡಿರುತ್ತದೆ. ತಾವು ನಗ್ನವಾಗಿರುವುದರಿಂದ ಅವರು ಮನುಷ್ಯನ ನಿಜ ಸ್ವರೂಪವನ್ನು ಪ್ರತಿನಿಧಿಸುತ್ತಾರೆ. ಹುಟ್ಟುವಾಗ ಯಾವ ರೂಪದಲ್ಲಿ ಬಂದರೋ, ಹೋಗುವಾಗ ಅದೇ ರೂಪದಲ್ಲಿ ಹೋಗುತ್ತಾರೆ. ಹಾಗಾಗಿ ಅವರು ನಗ್ನವಾಗಿರುವುದರ ಕುರಿತು ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ.

Scafold Academy

ಜಾಹೀರಾತು

ಅವರು ಪ್ರೀತಿ, ದ್ವೇಷ,ಅಸೂಯೆ ಮತ್ತು ಅಹಂನಂತಹ ಭಾವನೆಗಳಿಂದ ದೂರವಿರುತ್ತಾರೆ. ಅವರ ಪ್ರಕಾರ ಅತಿ ಕೊಳಕು ಮತ್ತು ಅಪವಿತ್ರ ವಸ್ತುಗಳಲ್ಲಿಯೂ ಸಹ ದೇವರು ನೆಲೆಸಿರುತ್ತಾನೆ. ಅಪಾರ್ಥಕ್ಕೆ ಒಳಗಾದ ಪಂಥ ಅಘೋರಿಗಳನ್ನು ತುಂಬಾ ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವರು ಶವಗಳನ್ನು ಭಕ್ಷಿಸುವ ಕಾರಣದಿಂದ ಜನರು ಇವರನ್ನು ವಾಮಾಚಾರದ ಜೊತೆಗೆ ಗುರುತಿಸುತ್ತಾರೆ. ಆದರೆ ಇವರು ಸರಳ ಜೀವಿಗಳು, ದೇವರನ್ನು ಹುಡುಕಲು ಅತಿರೇಕದ ಮಾರ್ಗಗಳನ್ನು ಅನುಸರಿಸುತ್ತಾರೆ ಅಷ್ಟೇ. ಆದರೆ ಇವರಲ್ಲಿ ಗುಣಪಡಿಸುವ ಶಕ್ತಿ ಇದೆ. ಇವರು ಒಬ್ಬ ರೋಗಿಯ ದೇಹದಲ್ಲಿನ ಕಲ್ಮಶಗಳನ್ನು ಹೊರಗೆ ವರ್ಗಾವಣೆ ಮಾಡಿ, ಅವರಿಗೆ ಮತ್ತೆ ಆರೋಗ್ಯವನ್ನು ತಂದು ಕೊಡುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಶಕ್ತಿ ವಾಮಾಚಾರದ ಮೂಲಕ ಸಿಗುವುದಿಲ್ಲ. ಇದು ಅಘೋರಿಗಳ ಮನಸ್ಸು ಮತ್ತು ದೇಹದ ಅತ್ಯುನ್ನತವಾದ ಹಂತವಾಗಿರುತ್ತದೆ. ಹಾಗಾಗಿಯೇ ಅವರು ತುಂಬಾ ಶಕ್ತಿಶಾಲಿಯಾಗಿರುತ್ತಾರೆ.

SendShare34Share
Previous Post

ಕಾಸರಗೋಡು : ನೀಲೇಶ್ವರ ದೈವದ ಕೋಲೊತ್ಸವದಲ್ಲಿ ಸಂಗ್ರಹದ ಪಟಾಕಿ ಸ್ಫೋಟ : ಹಲವು ಮಂದಿಗೆ ಗಾಯ.

Next Post

ದೀಪಾವಳಿಯಲ್ಲಿ ದೀಪಗಳ ಮಹತ್ವವೇನು ? ಪಟಾಕಿಯನ್ನೇಕೆ ಸುಡುತ್ತೇವೆ ? ತಿಳಿದುಕೊಳ್ಳೋಣ ಬನ್ನಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ದೀಪಾವಳಿಯಲ್ಲಿ ದೀಪಗಳ ಮಹತ್ವವೇನು ? ಪಟಾಕಿಯನ್ನೇಕೆ ಸುಡುತ್ತೇವೆ ? ತಿಳಿದುಕೊಳ್ಳೋಣ ಬನ್ನಿ

ದೀಪಾವಳಿಯಲ್ಲಿ ದೀಪಗಳ ಮಹತ್ವವೇನು ? ಪಟಾಕಿಯನ್ನೇಕೆ ಸುಡುತ್ತೇವೆ ? ತಿಳಿದುಕೊಳ್ಳೋಣ ಬನ್ನಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..