• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ವಕ್ಫ್‌, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

ವಕ್ಫ್‌, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

November 21, 2024
ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿ : ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿ : ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

June 19, 2026
56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ – ಮೋದಿ ಶುಭಾಶಯ

56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ – ಮೋದಿ ಶುಭಾಶಯ

June 19, 2026
ಮತ್ತೆ ಗರಿಗೆದರಿದ ಅಶೋಕ್ ರೈ ಗೆ ಸಚಿವ ಸ್ಥಾನ ವಿಚಾರ – ಹೈಕಮಾಂಡ್ ಬುಲಾವ್ – ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕ ಅಶೋಕ್ ರೈ

ಮತ್ತೆ ಗರಿಗೆದರಿದ ಅಶೋಕ್ ರೈ ಗೆ ಸಚಿವ ಸ್ಥಾನ ವಿಚಾರ – ಹೈಕಮಾಂಡ್ ಬುಲಾವ್ – ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕ ಅಶೋಕ್ ರೈ

June 19, 2026
ಪುತ್ತೂರು: 19ರಿಂದ 21ರವರೆಗೆ ಉಪ್ಪಿನಂಗಡಿಯಲ್ಲಿ ಹಲಸು- ಮಾವು ಮೇಳ

ಪುತ್ತೂರು: 19ರಿಂದ 21ರವರೆಗೆ ಉಪ್ಪಿನಂಗಡಿಯಲ್ಲಿ ಹಲಸು- ಮಾವು ಮೇಳ

June 18, 2026
ಪುತ್ತೂರು: ಬೋಲ್ವಾರ್ ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ  ಜೂ.17 ರ ರಾತ್ರಿ  ನಿಧನ

ಪುತ್ತೂರು: ಬೋಲ್ವಾರ್ ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ ಜೂ.17 ರ ರಾತ್ರಿ ನಿಧನ

June 18, 2026
ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಸಭೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಸಭೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

June 17, 2026
ಡಿಜಿಟಲ್ ವಿಕೃತಿಗೆ ಬ್ರೇಕ್ ಹಾಕಲು ಪಣ- ಕಂಡ ಕಂಡವರ ಫೋಟೋ, ವಿಡಿಯೋಗಳನ್ನು ವೈರಲ್(ಶೇರ್) ಮಾಡುವವರ ವಿರುದ್ಧ ಎಫ್​​​ಐಆರ್

ಡಿಜಿಟಲ್ ವಿಕೃತಿಗೆ ಬ್ರೇಕ್ ಹಾಕಲು ಪಣ- ಕಂಡ ಕಂಡವರ ಫೋಟೋ, ವಿಡಿಯೋಗಳನ್ನು ವೈರಲ್(ಶೇರ್) ಮಾಡುವವರ ವಿರುದ್ಧ ಎಫ್​​​ಐಆರ್

June 17, 2026
ಉದ್ಯಮಿ ಪ್ರಭಾಕರ್. ಕೆ ಸಾಲಿಯಾನ್ ಬಾಕಿಲಗುತ್ತು‌ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ

ಉದ್ಯಮಿ ಪ್ರಭಾಕರ್. ಕೆ ಸಾಲಿಯಾನ್ ಬಾಕಿಲಗುತ್ತು‌ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ

June 17, 2026
ಅಣ್ಣಾಮಲೈ ಹೊಸ ಪಕ್ಷದ ರೋಡ್‌ಮ್ಯಾಪ್ ರೆಡಿ- 50 ಲಕ್ಷ ಸದಸ್ಯರೇ ಟಾರ್ಗೆಟ್!

ಅಣ್ಣಾಮಲೈ ಹೊಸ ಪಕ್ಷದ ರೋಡ್‌ಮ್ಯಾಪ್ ರೆಡಿ- 50 ಲಕ್ಷ ಸದಸ್ಯರೇ ಟಾರ್ಗೆಟ್!

June 17, 2026
ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ರಸ್ತೆಗಳ ಅಭಿವೃದ್ಧಿಗೆ 6 ಕೋಟಿ ಅನುದಾನ ಮಂಜೂರು

June 17, 2026
ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

June 17, 2026
ಬಂಟ್ವಾಳದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆಯಲಿಲ್ಲ ಮಠಂದೂರು ಬಂದು ಸೇರಿಕೊಂಡದ್ದು- ನಾನು ಅಪ್ಪಟ ಕಾಂಗ್ರೆಸ್ಸಿಗ: ಗಿರಿಧರ್ ನಾಯ್ಕ್

ಬಂಟ್ವಾಳದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆಯಲಿಲ್ಲ ಮಠಂದೂರು ಬಂದು ಸೇರಿಕೊಂಡದ್ದು- ನಾನು ಅಪ್ಪಟ ಕಾಂಗ್ರೆಸ್ಸಿಗ: ಗಿರಿಧರ್ ನಾಯ್ಕ್

June 15, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, June 19, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮತ್ತೆ ಗರಿಗೆದರಿದ ಅಶೋಕ್ ರೈ ಗೆ ಸಚಿವ ಸ್ಥಾನ ವಿಚಾರ – ಹೈಕಮಾಂಡ್ ಬುಲಾವ್ – ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕ ಅಶೋಕ್ ರೈ

    ಮತ್ತೆ ಗರಿಗೆದರಿದ ಅಶೋಕ್ ರೈ ಗೆ ಸಚಿವ ಸ್ಥಾನ ವಿಚಾರ – ಹೈಕಮಾಂಡ್ ಬುಲಾವ್ – ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕ ಅಶೋಕ್ ರೈ

    ಪುತ್ತೂರು: 19ರಿಂದ 21ರವರೆಗೆ ಉಪ್ಪಿನಂಗಡಿಯಲ್ಲಿ ಹಲಸು- ಮಾವು ಮೇಳ

    ಪುತ್ತೂರು: 19ರಿಂದ 21ರವರೆಗೆ ಉಪ್ಪಿನಂಗಡಿಯಲ್ಲಿ ಹಲಸು- ಮಾವು ಮೇಳ

    ಪುತ್ತೂರು: ಬೋಲ್ವಾರ್ ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ  ಜೂ.17 ರ ರಾತ್ರಿ  ನಿಧನ

    ಪುತ್ತೂರು: ಬೋಲ್ವಾರ್ ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ ಜೂ.17 ರ ರಾತ್ರಿ ನಿಧನ

    ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಸಭೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

    ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು: ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಸಭೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

    ಉದ್ಯಮಿ ಪ್ರಭಾಕರ್. ಕೆ ಸಾಲಿಯಾನ್ ಬಾಕಿಲಗುತ್ತು‌ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ

    ಉದ್ಯಮಿ ಪ್ರಭಾಕರ್. ಕೆ ಸಾಲಿಯಾನ್ ಬಾಕಿಲಗುತ್ತು‌ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ

    ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

    ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ರಸ್ತೆಗಳ ಅಭಿವೃದ್ಧಿಗೆ 6 ಕೋಟಿ ಅನುದಾನ ಮಂಜೂರು

    ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

    ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

    ಬಂಟ್ವಾಳದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆಯಲಿಲ್ಲ ಮಠಂದೂರು ಬಂದು ಸೇರಿಕೊಂಡದ್ದು- ನಾನು ಅಪ್ಪಟ ಕಾಂಗ್ರೆಸ್ಸಿಗ: ಗಿರಿಧರ್ ನಾಯ್ಕ್

    ಬಂಟ್ವಾಳದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆಯಲಿಲ್ಲ ಮಠಂದೂರು ಬಂದು ಸೇರಿಕೊಂಡದ್ದು- ನಾನು ಅಪ್ಪಟ ಕಾಂಗ್ರೆಸ್ಸಿಗ: ಗಿರಿಧರ್ ನಾಯ್ಕ್

    ಪುತ್ತೂರು: ಉಪ್ಪಿನಂಗಡಿ, ಕಬಕ, ಪುರುಷರಕಟ್ಟೆ, ಕೊಳ್ತಿಗೆ ಚತುಷ್ಪಥ ಯೋಜನೆಗೆ 25ಕೋಟಿ ಬಿಡುಗಡೆ

    ಪುತ್ತೂರು: ಉಪ್ಪಿನಂಗಡಿ, ಕಬಕ, ಪುರುಷರಕಟ್ಟೆ, ಕೊಳ್ತಿಗೆ ಚತುಷ್ಪಥ ಯೋಜನೆಗೆ 25ಕೋಟಿ ಬಿಡುಗಡೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ವಕ್ಫ್‌, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

by ಪ್ರಜಾಧ್ವನಿ ನ್ಯೂಸ್
November 21, 2024
in ದಕ್ಷಿಣ ಕನ್ನಡ, ಪುತ್ತೂರು, ಪ್ರಾದೇಶಿಕ, ರಾಷ್ಟ್ರೀಯ
0
ವಕ್ಫ್‌, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ
34
SHARES
98
VIEWS
ShareShareShare

ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪುತ್ತೂರು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ನೀಡುವ ಹುನ್ನಾರ ನಡೆಯುತ್ತಿದೆ.

ವಕ್ಫ್‌ಆಸ್ತಿ, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ. ಟ್ರಸ್ಟ್ ಹೆಸರಿನಲ್ಲಿ ಸರಕಾರಿ ಆಸ್ಪತ್ರೆಯ ಕಬಳಿಕೆಯ ಹುನ್ನಾರ ನಡೆಯುತ್ತಿದ್ದು ಇದನ್ನು ಬಿಜೆಪಿ ಖಂಡಿಸುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.

ನ.21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಠಾಚಾರ, ಹಗರಣಗಳು ಸ್ವಜನ ಪಕ್ಷಪಾತದಲ್ಲಿ ತುಂಬಿ ತುಳುಕಿದೆ. ದ.ಕ ಜಿಲ್ಲೆ ಇದಕ್ಕೆ ಹೊರತಾಗಿತ್ತು. ಆದರೆ ಈಗ ರಾಜ್ಯದಲ್ಲಿ ನಡೆಯುವ ವಿದ್ಯಾಮಾನಗಳು ಪುತ್ತೂರಿನಲ್ಲಿಯೂ ನಡೆಯುತ್ತಿದೆ. ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಜಾಗವನ್ನು ಖಾಸಗಿ ಟ್ರಸ್ಟ್ ಒಂದಕ್ಕೆ ನೀಡಲು ತಹಶೀಲ್ದಾರ್, ನಗರ ಸಭೆ, ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯವರಿಗೆ ಪತ್ರವೊಂದು ದೊರೆತಿದ್ದು ಇನ್ನು ಮುಂದೆ ಪುತ್ತೂರಿನಲ್ಲಿ ಯಾವುದೇ ಇಲಾಖೆ ಜಾಗ ಉಳಿಯುವುದಿಲ್ಲ ಎಂಬ ಅನುಮಾನ ಕಾಡುತ್ತಿದೆ.

ಪುತ್ತೂರಿನ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್‌ನಿಂದ ಅಶೋಕ್ ಕುಮಾರ್ ರೈ ಎಂಬವರ ಹೆಸರಿನಲ್ಲಿ 16-07-2024ರಂದು ಮುಖ್ಯಮಂತ್ರಿಯವರಿಗೆ ಪತ್ರವೊಂದನ್ನು ಬರೆದಿದ್ದು ಟ್ರಸ್ಟ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಗರ ಸಭಾ ವ್ಯಾಪ್ತಿಯ ಸ.ನಂ 131/14ಎರಲ್ಲಿ 0.80ರಲ್ಲಿ ಸಾರ್ವಜನಿಕ ಆಸ್ಪತ್ರೆಯ ಉದ್ದೇಶಗಳಿಗೆ ಕಾಯ್ದಿರಿಸಿದ್ದ ಜಮೀನನ್ನು ರದ್ದುಪಡಿಸಿ ಅದರಲ್ಲಿ 0.30ಸೆಂಟ್ಸ್ ಜಾಗವನ್ನು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಇದರ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಇಲಾಖೆ ಶಿಪಾರಸ್ಸು ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಟ್ರಸ್ಟ್ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸದ್ರಿ ಟ್ರಸ್ಟ್‌ಗೆ ಜಮೀನು ನೀಡುವ ಬಗ್ಗೆ ಕ್ರಮ ವಹಿಸಲು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು 4 ತಿಂಗಳ ಒಳಗಾಗಿ ಸದ್ರಿ ಜಮೀನಿನ ಮಂಜೂರಾತಿ ಮಾಡುವಂತೆ ಆದೇಶಿಸಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿಯವರು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಸದರಿ ಆಸ್ಪತ್ರೆಯ ಜಾಗವನ್ನು ಉಲ್ಲೇಖಿಸಿ 30ಸೆಂಟ್ಸ್ ಬದಲು 10ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಭೂ ಮಾಪನಾ ಇಲಾಖೆ, ತಹಶೀಲ್ದಾರ್‌, ಕಂದಾಯ ನಿರೀಕ್ಷಕರಿಗೆ ಆದೇಶಿಸಿದ್ದಾರೆ. ತಹಶೀಲ್ದಾರ್‌ರವರು ಪತ್ರಿಕಾ ಪ್ರಕಟಣೆಗಾಗಿ ನಗರ ಸಭೆ ಹಾಗೂ ಇಲಾಖಾ ಅಭಿಪ್ರಾಯಕ್ಕಾಗಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಕಳುಹಿಸಿದ್ದಾರೆ. ಜಮೀನು ಮಂಜೂರು ಮಾಡಲು ತುರ್ತಾಗಿ ಮುಂದಾಗಿದ್ದು ನೋಡಿದರೆ ಇದರ ಹಿಂದೆ ಯಾವುದೋ ಪ್ರಬಲವಾದ ಶಕ್ತಿ ಇದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಯಾರದ್ದು? ಅದು ಯಾವಾಗ ಆರಂಭವಾಯಿತು. ಪುತ್ತೂರಿನಲ್ಲಿ ಅದರ ಕಚೇರಿ ಎಲ್ಲಿದೆ. ಅದರ ಸೇವೆಗಳು ಏನು. ಈ ಟ್ರಸ್ಟ್‌ನ ಪದಾಧಿಕಾರಿಗಳು ಯಾರು ? ಅದರ ಕಾರ್ಯವ್ಯಾಪ್ತಿ ಏನು ? ಅದು ಪುತ್ತೂರು ತಾಲೂಕಿನಲ್ಲಿ ನಡೆಸಿದ ಜನಪರ ಕಾರ್ಯಗಳು ಏನು ? ಸದರಿ ಟ್ರಸ್ಟ್ ಇದರ ಉದ್ದೇಶ ಏನು ? ಸದರಿ ಟ್ರಸ್ಟ್ ಇದಕ್ಕೆ ಸಾರ್ವಜನಿಕ ಆಸ್ಪತ್ರೆ ಇದಕ್ಕೆ ಮೀಸಲಾದ ಜಮೀನನ್ನು ನೀಡಬೇಕಾದ ಅಗತ್ಯತೆ ಏನು ? ಸರಕಾರಿ ಇಲಾಖೆಗಳಿಗೆ ಸ್ವಂತ ಸೂರು ಇಲ್ಲದ ಸಮಯದಲ್ಲಿ ಖಾಸಗಿ ಟ್ರಸ್ಟ್ ಗೆ ಸಾರ್ವಜನಿಕ ಆಸ್ಪತ್ರೆಯ ಜಮೀನನ್ನು ರದ್ದು ಪಡಿಸಿ ನೀಡುವ ಅಗತ್ಯತೆ ಏನಿದೆ.? ಈ ಮೊದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಹಲವಾರು ಖಾಸಗಿ ಟ್ರಸ್ಟ್ ಗಳು, ಇಲಾಖೆಗಳು, ಸಮುದಾಯದ ಅರ್ಜಿಗಳನ್ನು ಕಂದಾಯ ಇಲಾಖೆಯು ಇಷ್ಟು ತ್ವರಿತವಾಗಿ ಯಾಕೆ ವಿಲೇಮಾಡಲು ಬಯಸಲಿಲ್ಲ? ಈ ಹಿಂದೆಯೇ ಅರ್ಜಿ ನೀಡಿದ ಸಂಸ್ಥೆಗಳ, ಸಮುದಾಯಗಳ ಇಲಾಖೆಗಳ ಅರ್ಜಿಗಳನ್ನು ಬದಿಗಿರಿಸಿ ಈ ಖಾಸಗಿ ಟ್ರಸ್ಟ್ ಇದಕ್ಕೆ ಯಾಕೆ ಜಮೀನು ನೀಡಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಅವರು ಪ್ರಶ್ನಿಸಿದರು.

ಶಾಸಕ ಅಶೋಕ್ ಕುಮಾರ್ ರೈಯವರು ಕೆಲದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪುತ್ತೂರಿನ ಹೃದಯ ಭಾಗದಲ್ಲಿ ವ್ಯಾಲ್ಯುವೇಬಲ್ ಜಾಗವನ್ನು ಮಂಜೂರು ಮಾಡಲಾಗುವುದಾಗಿ ತಿಳಿಸಿದ್ದರು. ಆ ವ್ಯಾಲ್ಯುವೇಬಲ್ ಜಾಗ ಇದೇ ಇರಬಹುದಾ? ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸಿ, ಬಳಿಕ ಅದನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ನೀಡುವ ಹುನ್ನಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಮೌಲ್ಯ ಮಾಪಕರ ಪ್ರಕಾರ ಇಲ್ಲಿ ಸೆಂಟ್ಸ್ ರೂ.30ಲಕ್ಷದಷ್ಟು ಬೆಲೆಯಿದೆ. 30 ಸೆಂಟ್ಸ್‌ಗೆ 9 ಕೋಟಿ ಬೆಲೆಯಿದೆ. ಇಂತಹ ಬೆಲೆಯ ಜಾಗವನ್ನು ಟ್ರಸ್ಟ್ ನೀಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿಗೆ 40ಎಕರೆ ಜಾಗವನ್ನು ಕಾದಿರಿಸಿದ್ದರು. ನನ್ನ ಅವಧಿಯಲ್ಲಿ ಅದನ್ನು ಮುಂದುವರಿಸಿದಾಗ ಮೆಡಿಕಲ್ ಕಾಲೇಜು ಮಂಜೂರಾಗಬೇಕಾದರೆ 300ಬೆಡ್ ಆಸ್ಪತ್ರೆಯ ಅವಶ್ಯಕತೆಯಿತ್ತು. ಅದಕ್ಕಾಗಿ ಆಸ್ಪತ್ರೆ ಸುತ್ತ ಮುತ್ತಲಿನ ಉಪನೋಂದಾವಣಾಧಿಕಾರಿ ಕಚೇರಿ, ಸಬ್ ಜೈಲು, ಕಂದಾಯ ಇಲಾಖೆಯ ಜಾಗ ಹಾಗೂ ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ 19 ಸೆಂಟ್ಸ್ ಜಾಗ ಸೇರಿದಂತೆ ಒಟ್ಟು 6 ಎಕರೆ ಜಾಗವನ್ನು ಸರಕಾರಿ ಆಸ್ಪತ್ರೆಯ ಉದ್ದೇಶಗಳಿಗೆ ಪಹಣಿಯೂ ರಚಿಸಲಾಗಿದೆ. 300 ಬೆಡ್‌ನ ಆಸ್ಪತ್ರೆಯ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ದಪಡಿಸಿ ರೂ.180ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು ಎಂದರು.

ಎಲ್ಲೆಲ್ಲಿಯೂ ಜಾಗವನ್ನು ನುಂಗುವುದನ್ನು ಕೇಳಿದ್ದೇವೆ. ಒಬ್ಬ ಮುಖ್ಯಮಂತ್ರಿಯೇ ನೇರವಾಗಿ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಾಸಕರಿಗೆ ಆರೋಗ್ಯ ಇಲಾಖೆಯ ಜಾಗ ರದ್ದು ಮಾಡಿ ಟ್ರಸ್ಟ್ ನೀಡುವ ಉದ್ದೇಶ ಏನು? ಬಡವರ ಆಸ್ಪತ್ರೆಯ ಜಾಗವನ್ನು ಈ ರೀತಿಯಾಗಿ ನುಂಗುವುದಾದರೆ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಜಾಗವನ್ನೂ ಯಾವುದೋ ಟ್ರಸ್ಟ್‌ಗೆ ಈ ಸರಕಾರ ಹಾಗೂ ಮುಖ್ಯ ಮಂತ್ರಿಗಳು ಹಸ್ತಾಂತರಿಸಲು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಜನಪ್ರತಿನಿಧಿಗಳಿಗೆ ಸಾರ್ವಜನಿಕ ಹಿತಾಶಕ್ತಿಯಿರಬೇಕು. ಸಾರ್ವಜನಿಕ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಅವರೇ ನುಂಗುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ.

Muliya

ಜಾಹೀರಾತು

ಜಿಲ್ಲೆಯ 6 ಶಾಸಕರು ವಿಧಾನ ಸಭೆಯಲ್ಲಿ ಹಾಗೂ 2 ಪರಿಷತ್ ಸದಸ್ಯರು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಲಿದ್ದಾರೆ. ಪಕ್ಷದ ಮುಖಾಂತರ ಕಾನೂನಾತ್ಮಕ ಹೋರಾಟ ನಡೆಯಲಿದೆ. ಸಂಸದರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಪ್ರೇರಣೆ ನೀಡುವ, ಕಾನೂನು ಬಾಹಿರವಾಗಿ ನಡೆಯುವ ಭ್ರಷ್ಟ್ರ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಯಲಿದೆ. ಸರಕಾರಿ ಆಸ್ಪತ್ರೆಯ ಒಂದಿಂಚ್ಚು ಜಾಗವನ್ನು ಯಾರಿಗೂ ನೀಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಸರಕಾರಿ ಆಸ್ತಿಯನ್ನು ನುಂಗಿ ನೀರು ಕುಡಿಯುವ ಯೋಚನೆ ಮಾಡುತ್ತಿದ್ದಾರೆ. ವಕ್ಪ್, ಮೂಡಾ ಆಯ್ತು. ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಬಂದಿದ್ದಾರೆ. ಈ ಸರಕಾರದಲ್ಲಿ ಭೂ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. 300 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿರುವ ಜಾಗವನ್ನು ನುಂಗಲು ಮುಂದಾಗಿದ್ದಾರೆ. ಇವರಿಗೆ ಸಾರ್ವಜನಿಕರ ಹಿತಾಶಕ್ತಿಯಿಲ್ಲ. ವೈಯಕ್ತಿಕ ಹಿತಾಶಕ್ತಿ ಮಾತ್ರ. ಸರಕಾರಿ ಆಸ್ಪತ್ರೆಯ ಜಮೀನನ್ನೇ ಮಾರಾಟ ಮಾಡುವ ಉದ್ದೇಶ ಹೊಂದಿರುವವರಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕಾಣುವ ಭರವಸೆ ಇದೆಯಾ ಎಂದು ಪ್ರಶ್ನಿಸಿದರು.

ಎಲ್ಲಾ ಜಾಗ ಸೇರಿಸಿ 80 ಸೆಂಟ್ಸ್‌ನಲ್ಲಿ 19 ಸೆಂಟ್ಸ್‌ನಲ್ಲಿ 19 ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆ ಮಂಜೂರಾಗಿತ್ತು. ಸರಕಾರಿ ಅಸ್ಪತ್ರೆಯ ಅಭಿವೃದ್ಧಿಗಾಗಿ ದಲಿತ ಸಂಘಟನೆಯವರನ್ನು ಅಂದಿನ ಸಹಾಯಕ ಆಯುಕ್ತರಾಗಿದ್ದ ಯತೀಶ್ ಉಲ್ಲಾಳ್ ನೇತೃತ್ವದಲ್ಲಿ ಮನವೊಳಿಸಿ ಸರಕಾರಿ ಆಸ್ಪತ್ರೆಗೆ ನೀಡಲಾಗಿತ್ತು. ಇಲ್ಲಿನ 19 ಸೆಂಟ್ಸ್ ಬದಲು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬನ್ನೂರು ಸಮೀಪ 60 ಸೆಂಟ್ಸ್ ಜಾಗವನ್ನು ಕಾದಿರಿಸಲಾಗಿದೆ.

ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಮಾರ್ಗದರ್ಶನದಂತೆ ಸರಕಾರಿ ಮೆಡಿಕಲ್ ಕಾಲೇಜಿಗೆ 300ಬೆಡ್ ಆಸ್ಪತ್ರೆಯ ಆವಶ್ಯಕತೆಯಿದೆ. ಅದಕ್ಕಾಗಿ 300ಬೆಡ್‌ನ ಆಸ್ಪತ್ರೆ ಮಾಡಲು ಮುಂದಾಗಿದ್ದೆ. ಸರಕಾರಿ ಆಸ್ಪತ್ರೆಯನ್ನು ಎಲ್ಲಿಯೂ ಮೂಲೆಯಲ್ಲಿ ಕಟ್ಟಿದರೆ ಹೇಗೆ. ಅಲ್ಲಿಗೆ ರೋಗಿಗಳು ಹೋಗಲು ಸಾಧ್ಯವಿದೆಯಾ. ಮೆಡಿಕಲ್ ಕಾಲೇಜು ಎಲ್ಲಿ ಬೇಕಾದರೂ ಕಟ್ಟಬಹುದು. ಕಲಿಯುವ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಹೋಗಬಹುದು. ವಿಟ್ಲದಲ್ಲಿಯೂ ಆಸ್ಪತ್ರೆಯ ಜಾಗವನ್ನು ಪಕ್ಷದ ಕಚೇರಿಗೆ ನೀಡಲು ಮುಂದಾಗಿದ್ದರು. ಆದರೆ ಅಲ್ಲಿ ಪಟ್ಟಣ ಪಂಚಾಯತ್‌ನವರು ವಿರೋಧಿಸಿದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ.

ashwinistudioputtur

ಜಾಹೀರಾತು

ಇವರು ಹುಡುಕುವುದೇ ಸರಕಾರಿ ಆಸ್ಪತ್ರೆಯ ಜಾಗ. ಮಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯೂ ಪ್ರಿಯದರ್ಶಿನಿ ಟ್ರಸ್ಟ್‌ನ ಹೆಸರಿನಲ್ಲಿರುವ ಮಾಹಿತಿಯಿದೆ. ಪುತ್ತೂರಿನಲ್ಲಿ ಭೂ ಕಬಳಿಕೆಯ ಪ್ರಥಮ ಪ್ರಕರಣವಾಗಿದೆ. ಬಿಜೆಪಿಯಿಂದ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆಸ್ಪತ್ರೆಯ ಜಾಗವನ್ನು ಟ್ರಸ್ಟ್‌ಗೆ ನೀಡುವುದನ್ನು ಅಧಿಕಾರಿಗಳು ತಿರಸ್ಕಾರ ಮಾಡದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ. ಯಾವುದೇ ಇಲಾಖೆಗಳಿಗೆ ಕಾದಿರಿಸಿದ ಜಾಗವನ್ನು ನೀಡುವುದನ್ನ ಬಿಜೆಪಿ ವಿರೋಧಿಸುತ್ತಿದೆ ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಪಿ.ಬಿ. ಶಿವಕುಮಾರ್ ಕಲ್ಲಿಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

SendShare14Share
Previous Post

ಬಡವರ ಬಿಪಿಎಲ್‌ ಕಾರ್ಡ್‌ ರದ್ದಾಗಲು ಬಿಡಲ್ಲ – ಡಿಕೆ ಶಿವಕುಮಾರ್

Next Post

ಪ್ರಿಯದರ್ಶಿನಿ ಟ್ರಸ್ಟ್‌ಗೆ ಜಮೀನು ಮಂಜೂರಾತಿಗೆ ಪತ್ರ ನೀಡಿದ್ದು ನಿಜ ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ತಿಂಗಳ ಹಿಂದೆಯೇ ಸೂಚಿಸಲಾಗಿದೆ; ಶಾಸಕ ಅಶೋಕ್ ರೈ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪ್ರಿಯದರ್ಶಿನಿ ಟ್ರಸ್ಟ್‌ಗೆ ಜಮೀನು ಮಂಜೂರಾತಿಗೆ ಪತ್ರ ನೀಡಿದ್ದು ನಿಜ ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ತಿಂಗಳ ಹಿಂದೆಯೇ ಸೂಚಿಸಲಾಗಿದೆ; ಶಾಸಕ ಅಶೋಕ್ ರೈ

ಪ್ರಿಯದರ್ಶಿನಿ ಟ್ರಸ್ಟ್‌ಗೆ ಜಮೀನು ಮಂಜೂರಾತಿಗೆ ಪತ್ರ ನೀಡಿದ್ದು ನಿಜ ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ತಿಂಗಳ ಹಿಂದೆಯೇ ಸೂಚಿಸಲಾಗಿದೆ; ಶಾಸಕ ಅಶೋಕ್ ರೈ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..