ಪುತ್ತೂರು: ಹಿಂದು ಸಂಘಟನೆಗಳ ಮುಖಂಡ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರ್ನಾಟಕದ ನಂಬರ್ ವನ್ ಡಿಜಿಟಲ್ ಮಾಧ್ಯಮ ಕರ್ನಾಟಕ ಟಿವಿಯು ನೀಡುವ ಕರಾವಳಿ ಮಧ್ಯ ಕರ್ನಾಟಕ ವಿಭಾಗ ಕರ್ನಾಟಕ ಜನನಾಯಕ ಲೀಡರ್ ಅವಾರ್ಡ್ ಪ್ರಶಸ್ತಿಗೆ ನೀಡಿ ಗೌರವಿಸಿದೆ.
ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಜೂ.20ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪ್ರಶಸ್ತಿ ಸ್ಚೀಕರಿದರು. ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಟಿವಿಯ ಮುಖ್ಯಸ್ಥ ಶಿವಕುಮಾರ್, ಮಾಜಿ ಸುರಪುರ ಮಾಜಿ ಶಾಸಕ ರಾಜು ಗೌಡ, ಉದ್ಯಮ ದಯಾನಂದ ಉಪಸ್ಥಿತರಿದ್ದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇ ಗೌಡ, ಶಾಸಕರಾದ ಬಸನ ಗೌಡ ಪಾಟೀಲ್ ಯತ್ನಾಲ್, ಹರೀಶ್ ಪೂಂಜ, ಗುರುರಾಜ್ ಗಂಟಿಹೊಳಿ, ಧೀರಜ್ ಮುನಿರಾಜ್, ಕುಮಾರ್ ಬಂಗಾರಪ್ಪ ಸಹಿತ ಹಲವು ಮಂದಿ ಶಾಸಕರು, ಸಚಿವರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅರುಣ್ ಕುಮಾರ್ ಪುತ್ತಿಲ ಅವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ, ಮಹೇಂದ್ರ ವರ್ಮ, ರಾಜು ಶೆಟ್ಟಿ, ರೂಪೇಶ್ ನೈಕ್, ರಘುರಾಮ್ ವಿಟ್ಲ, ಹರೀಶ್ ಭಟ್ ಪುಣಚ, ರಾಜೇಶ್ ಕರವೀರ, ಹರಿಪ್ರಸಾದ್, ನವೀನ್ ಕಲ್ಯಾಟೆ, ಜನಾರ್ದನ ಕುರೆಮಜಲು, ಪ್ರಕಾಶ್ ಚಿಕ್ಕಮಡ್ನೂರು ಹಾಗೂ ಕಾರ್ಯಕರ್ತರು ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಪುತ್ತೂರಿನಿಂದ ಭಾಗವಹಿಸಿದ್ದರು.

























