ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇದ್ದರೂ ಕಾನೂನನ್ನು ಮೀರಿ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಜೆ ಮನೆಯ ಕುಶಾಲಪ್ಪ ಗೌಡರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳೆಂಜಾ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂಬಾತ ಸುಡುಮದ್ದನ್ನು ಸಿಡಿಸಿ ಮನೆಯಲ್ಲಿದ್ದ ಮಹಿಳೆಯರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ದೌರ್ಜನ್ಯವನ್ನು ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ತನ್ನ ಕುಟುಂಬದ ರಕ್ಷಣೆಗಾಗಿ ಕುಶಾಲಪ್ಪ ಗೌಡರು ಪ್ರತಿರೋಧವನ್ನು ತೋರಿರುತ್ತಾರೆ.
ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಗಾಯಗಳು ಆಗಿರುತ್ತದೆ. ಕಾನೂನು ಪ್ರಕಾರ ಪ್ರಸ್ತುತ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಇರುವಾಗ ಸಂಭ್ರಮಾಚರಣೆಯ ನೆಪದಲ್ಲಿ ಕುಶಾಲಪ್ಪ ಗೌಡರ ಆವರಣದ ಒಳಗೆ ಸುಡುಮದ್ದು ಸಿಡಿಸಿ ಸಂಭ್ರಮಾಚರಣೆ ಮಾಡಿರುವುದನ್ನು ಖಂಡಿಸುವುದಲ್ಲದೆ ಅಪ್ರಾಪ್ತ ಹೆಣ್ಣು ಮಗಳಿಗೆ ದೌರ್ಜನ್ಯ ಎಸಗಿರುವುದನ್ನು ಕೂಡ ನಾವು ಖಂಡಿಸುತ್ತೇವೆ. ಈ ಸಮಯದಲ್ಲಿ ಪರಸ್ಪರ ಹಲ್ಲೆ ನಡೆದಿರುವುದು ವಿಷಾದನೀಯ. ಆದರೆ ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ ಇವರನ್ನು ಎಳೆದು ತಂದಿರುವುದು ದುರದೃಷ್ಟಕರ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯು ತುರ್ತು ಕಾರ್ಯ ಪ್ರರ್ವತರಾಗಿ ತಪ್ಪಿತ್ತಸ್ಥರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಿಗಿಸಿರುವುದಕ್ಕೆ ನಾವು ಅಭಿನಂದಿಸುತ್ತೇವೆ.
ಆದರೆ ಬೆಳ್ತಂಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅವುಗಳನ್ನು ರಕ್ಷಿತ್ ಶಿವರಾಂರವರ ಹೆಸರನ್ನು ಎಳೆದು ತರುತ್ತಿರುವುದು ಬಿಜೆಪಿಗೆ ಇದೊಂದು ಚಾಳಿಯಾಗಿ ಬಂದಿರುತ್ತದೆ. ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರು ಕಾನೂನಿನ ಪರಿಜ್ಞಾನವಿಲ್ಲದೆ ಮತ್ತು ವಾಸ್ತವಿಕ ತಿಳಿದುಕೊಳ್ಳದೆ ಸಾರ್ವಜನಿಕವಾಗಿ ಮಾತನಾಡಿರುವುದು ಖಂಡನೀಯ. ನಾಗೇಶ್ ಕುಮಾರ್ ಗೌಡ, ಅಧ್ಯಕ್ಷರು, ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಸತೀಶ್ ಕೆ ಬಂಗೇರ ಕಾಶಿಪಟ್ಟ, ಅಧ್ಯಕ್ಷರು, ಬೆಳ್ತಂಗಡಿ ಬ್ಲಾಕ್ ನಗರ ಜಯಾನಂದ ಪಿಲಿಕಲ, ನಗರಾಧ್ಯಕ್ಷರು ಎಸ್.ಟಿ ಘಟಕ ನೇಮಿರಾಜ್ ಕಿಲ್ಲೂರು, ಅಧ್ಯಕ್ಷರು ಗ್ರಾಮೀಣ ಎಸ್.ಸಿ ಘಟಕ ಬಿ.ಕೆ ವಸಂತ್, ಪಕ್ಷದ ಮುಖಂಡರು ಶೇಖರ್ ಕುಕ್ಕೇಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀಧರ್ ಕಳೆಂಜ, ತಾಲೂಕು ಅಕ್ರಮ-ಸಕ್ರಮ ಸದಸ್ಯರು ಜೈಸನ್ ಪಟೇರಿ, ಅಧ್ಯಕ್ಷರು ತಾಲೂಕು ಅಲ್ಪಸಂಖ್ಯಾತ ಘಟಕ