ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಕುಮಾರಧಾರ ನದಿಗೆ ಸ್ನಾನ ಮಾಡಲು ಹೋದ ನಾಲ್ವರು ವಿದ್ಯಾರ್ಥಿಗಳ ಪೈಕಿ ಓರ್ವ ನೀರುಪಾಲಾದ ಘಟನೆ ನಡೆದಿದೆ.
ಮೃತ ಯುವಕನು ಪುತ್ತೂರಿನ ಕಾಲೇಜು ವಿದ್ಯಾರ್ಥಿಯಾಗಿದ್ದು ಮೂಲತಃ ಮೃತ ವ್ಯಕ್ತಿ ಕಿರಣ್ ಗದಗ ಮೂಲದವರು ಎಂದು ತಿಳಿದು ಬಂದಿದೆ. ಡೆತ್ ಪ್ಲೇಸ್ ಆಗಿರುವ ಕಟಾರ ಕುಮಾರಧಾರ ನದಿ ಈ ಪ್ರದೇಶದಲ್ಲಿ ಹತ್ತಾರು ಜನರ ಪ್ರಾಣ ಹೋಗಿದೆ.
ಮೃತ ವಿದ್ಯಾರ್ಥಿಯನ್ನು ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯುಟಿಕಲ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಕಿರಣ್

ಗದಗ ಮೂಲದವರಾಗಿರುವ ಕಿರಣ್ ಕಲ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ತಿಳಿದುಬಂದಿದೆ. ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಹೊಳೆಗಿಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ದೇಹ ಪತ್ತೆಹಚ್ಚಲು ಸ್ಥಳೀಯರದ ವಿಶ್ವನಾಥ ಗೌಡ ಗಣೇಶ್ ಗೌಡ ಬರ್ತೋಳಿ, ರಾಮಣ್ಣಗೌಡ ಗುಂಡೋಳೆ, ಶೀನಪ್ಪ ಗೌಡ, ಪೂವಪ್ಪ ಗೌಡ, ಜಗದೀಶ್ ಅಂದ್ರೀಗೇರು, ಕುಶಾಲಪ್ಪ ಗೌಡ ಮತ್ತು ಚೆನ್ನಪ್ಪ ಗೌಡ ಸಹಕರಿಸಿದರು.
ಇತ್ತೀಚೆಗೆ ವಿದ್ಯಾರ್ಥಿಗಳು ಪ್ರವಾಸ ಹೆಸರಿನಲ್ಲಿ ಬೀಚ್ ಸಮುದ್ರ ಮತ್ತು ಫಾಲ್ಸ್ ಗಳಿಗೆ ತೆರಳಿ ಹಲವು ಕಡೆ ದುರಂತಗಳು ಸಂಭವಿಸಿದೆ. ಆದರೂ ಕೂಡ ಜನರ ಅಜಾಗ್ರತೆಯಿಂದ ಇಂತಾ ಘಟನೆಗಳು ನಡೆಯುತ್ತಲೇ ಇದೆ. ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಸಾರ್ವಜನಿಕರ ಅಸಹಕಾರದಿಂದ ದುರಂತಗಳು ನಡೆಯುತ್ತಲೇ ಇದೆ. ಹಲವು ಕಡೆ ಹೆಚ್ಚಾಗಿ ವಿದ್ಯಾರ್ಥಿಗಳೇ ಈ ಒಂದು ಘಟನೆಗೆ ಬಲಿಯಾಗುತ್ತಿದ್ದಾರೆ.

























