ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಎಪ್ರಿಲ್ ತಿಂಗಳ ಆರ್ಥಿಕ ಧನಸಹಾಯ ವನ್ನು ಅನಾರೋಗ್ಯದಲ್ಲಿರುವ ಕಬಕ ಓಜಾಲ ನಿವಾಸಿ ಕಿರಣ್ ಗೌಡ ರವರಿಗೆ ಮತ್ತು ಸಂಪ್ಯ ಕರಿಮೊಗರು ನಿವಾಸಿ ಗಣೇಶ್ ಎಂಬವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ತಲಾ 10,000 ರೂಪಾಯಿ ಧನಸಹಾಯ ವಿತರಿಸಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಕೋಶಾಧಿಕಾರಿ ರೂಪೇಶ್ ನಾೖಕ್,ಪ್ರಮುಖರಾದ ಅನಿಲ್ ಗೌಡ ತೆಂಕಿಲ,ಸಂದೇಶ್ ನಾೖಕ್ ಕೆಯ್ಯೂರು,ತೀರ್ಥರಾಮ ಜಿಡೆಕಲ್ಲು,ಸ್ವಸ್ತಿಕ್ ಗೌಡ ತಾರಿಗುಡ್ಡೆ,ಗುರುಪ್ರಸಾದ್ ದೊಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು





























