• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ: ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ, ಜೆಡಿಯು ಸಂಸದ.

ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ: ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ, ಜೆಡಿಯು ಸಂಸದ.

June 5, 2024
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

June 25, 2026
ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

June 24, 2026
ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

June 24, 2026
ಬಾಲಿವುಡ್‍ನ  ಬಾದ್ ಶಾ, ಕಿಂಗ್ ಖಾನ್  ಶಾರುಖ್ ಖಾನ್  ಜೂನ್ 25ರಂದು ಮಂಗಳೂರಿಗೆ

ಬಾಲಿವುಡ್‍ನ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ

June 24, 2026
ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್  – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್ – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

June 24, 2026
ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

June 24, 2026
ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

June 23, 2026
ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

June 23, 2026
ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

June 23, 2026
ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

June 23, 2026
ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

June 23, 2026
ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ  ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

June 20, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, June 26, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಜ್ಯ

ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ: ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ, ಜೆಡಿಯು ಸಂಸದ.

by ಪ್ರಜಾಧ್ವನಿ ನ್ಯೂಸ್
June 5, 2024
in ರಾಜ್ಯ
0
ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ: ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ, ಜೆಡಿಯು ಸಂಸದ.
54
SHARES
154
VIEWS
ShareShareShare

ಹೊಸದಿಲ್ಲಿ: ಲೋಕಸಭೆ ಚುನಾವಣೆ ಫಲಿತಾಂಶ  ಬಂದ ಬಳಿಕ ಎನ್‌ಡಿಎ (NDA) ಮೈತ್ರಿಪಕ್ಷಗಳನ್ನು ಸೇರಿಸಿಕೊಂಡು ಕೇಂದ್ರ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇರುವಾಗಲೇ, ಬಿಜೆಪಿಗೆ (BJP) ಬೆವರು ಕಿತ್ತುಕೊಳ್ಳುವಂಥ ಕೆಲವು ಬೆಳವಣಿಗೆ ನಡೆದಿವೆ. ನಿತೀಶ್‌ ಕುಮಾರ್‌  ಅವರ ಜೆಡಿಯು (JDU) ಪಕ್ಷದ ಸಂಸದನೊಬ್ಬ, “ಪ್ರಧಾನಿ ಸ್ಥಾನಕ್ಕೆ ನಿತೀಶ್‌ಗಿಂತ ಅರ್ಹತೆ ಇರುವವರು ಬೇರೆ ಯಾರು?” ಎಂದು ಬಾಂಬ್‌ ಸಿಡಿಸಿದ್ದಾರೆ. ಹಾಗೆಯೇ ಜೆಡಿಯು ಎಕ್ಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್‌ನಲ್ಲಿ ಇಂಡಿಯಾ ಬಣದ (INDIA Bloc) ಕಡೆಗೆ ಒಲವು ಹೊಂದಿರುವ ಸುಳಿವು ನೀಡಿದೆ.

ಬಿಹಾರದ ಜೆಡಿಯು ಸಂಸದ ಡಾ. ಖಾಲಿದ್ ಅನ್ವರ್ ಎಂಬವರು ನಿತೀಶ್‌ ಕುಮಾರ್‌ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ನಿತೀಶ್ ಕುಮಾರ್‌ಗಿಂತ ಉತ್ತಮ ಪ್ರಧಾನಿ ಆಗಬಲ್ಲವರು ಯಾರು?
ನಿತೀಶ್ ಕುಮಾರ್ ಅವರು ಒಬ್ಬ ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಮತ್ತು ಅವರು ಎಲ್ಲರನ್ನೂ ಗೌರವಿಸುತ್ತಾರೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ. ನಾವು ಸದ್ಯಕ್ಕೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಆದರೆ ಈ ಮೊದಲು ಮತ್ತು ಇಂದೂ ಜನರು ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಲು ಬಯಸಿದ್ದಾರೆ. ಇಂದಿನ ಫಲಿತಾಂಶದ ಬಳಿಕ ಜನರ ನಿರೀಕ್ಷೆ ಹೆಚ್ಚಿದೆ” ಎಂದು ಹೇಳಿದ್ದಾರೆ.

“ನಿತೀಶ್‌ ಅವರು ಬಿಹಾರ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ದ ರೀತಿ, ಅವರು ಕೃಷಿ ಸಚಿವರಾಗಿದ್ದಾಗ ದೇಶಕ್ಕಾಗಿ ರೂಪಿಸಿದ ಮಾರ್ಗಸೂಚಿಯನ್ನು, ಅವರು ರೈಲ್ವೇ ಕ್ಷೇತ್ರಕ್ಕಾಗಿ ಮಾಡಿದ ಕಾರ್ಯವನ್ನು ಸಹ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ” ಎಂದಿದ್ದಾರೆ ಅನ್ವರ್.‌

ಈ ಮಾತುಗಳು ಎನ್‌ಡಿಎ ಸರ್ಕಾರದಲ್ಲಿ ನಿತೀಶ್‌ ಭಾಗವಹಿಸುವಿಕೆಯ ಕುರಿತು ಸಂಶಯ ಮೂಡಿಸಿವೆ. ನಿತೀಶ್‌ ಕುಮಾರ್‌ ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಅದನ್ನು ತಮ್ಮ ಸಂಸದರ ಮೂಲಕ ಹೇಳಿಸಿದರೇ ಎಂಬ ಜಿಜ್ಞಾಸೆ ಮೂಡಿದೆ. ಅಥವಾ, ಎನ್‌ಡಿಎ ಹಾಗೂ ಇಂಡಿ ಒಕ್ಕೂಟಗಳಲ್ಲಿ ಪ್ರಧಾನಿ ಪದವಿಯನ್ನು ತಮಗೆ ಯಾರು ನೀಡುತ್ತಾರೋ ಅವರ ಜೊತೆ ಹೋಗಲು ಸಿದ್ಧ ಎಂಬ ಸಂದೇಶವನ್ನು ನಿತೀಶ್‌ ರವಾನಿಸಿದರೇ ಎಂಬ ಅನುಮಾನವೂ ಮೂಡಿದೆ.

ಜನತಾ ದಳ (ಸಂಯುಕ್ತ) ಬಿಹಾರದಲ್ಲಿ 14 ಸ್ಥಾನಗಳಲ್ಲಿ ಮುಂದಿದೆ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 40 ಲೋಕಸಭಾ ಕ್ಷೇತ್ರಗಳು ಇಲ್ಲಿವೆ. ಏತನ್ಮಧ್ಯೆ ಇಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಜನತಾದಳ ಐದು ಸ್ಥಾನ, ಕಾಂಗ್ರೆಸ್ ಎರಡು ಸ್ಥಾನ, ಕಮ್ಯುನಿಸ್ಟ್ ಪಕ್ಷ 1 ಸ್ಥಾನ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 1 ಸ್ಥಾನ ಗಳಿಸಿವೆ.

ಇನ್ನೊಂದು ಬೆಳವಣಿಗೆಯಲ್ಲಿ, ಜೆಡಿಯು ಪಕ್ಷದ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಾಕಲಾದ ಒಂದು ಪೋಸ್ಟ್‌, ಇನ್ನಷ್ಟು ಅಚ್ಚರಿ ಮೂಡಿಸಿದೆ. ಅದರಲ್ಲಿ, ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿರುವ ನಿತೀಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಪಕ್ಷ, “ನ್ಯಾಯ್ ಕೆ ಸಾಥ್ ವಿಕಾಸ್ ಕಾ ಸಂಕಲ್ಪ್ ಹೋ ರಹಾ ಪೂರಾ (ನ್ಯಾಯದೊಂದಿಗೆ ಅಭಿವೃದ್ಧಿಯ ನಿರ್ಣಯವನ್ನು ಈಡೇರಿಸಲಾಗುತ್ತಿದೆ)” ಎಂದು ಬರೆದಿದೆ. ನಿತೀಶ್ ಕುಮಾರ್ ಅವರು ಅಭಿವೃದ್ಧಿ ಕುರಿತು ಮಾತನಾಡಿರುವ ವಿಡಿಯೋವನ್ನು ಪಕ್ಷವು ಹಂಚಿಕೊಂಡಿದೆ. ವಿಡಿಯೋದಲ್ಲಿರುವ ಹಿನ್ನೆಲೆ ಸಂಗೀತ ರಜನಿಕಾಂತ್ ಅವರ ಜೈಲರ್ ಚಿತ್ರದ್ದು.

ashwinistudioputtur

ಜಾಹೀರಾತು

ಇಲ್ಲಿ ʼನ್ಯಾಯʼ ಎಂಬ ಪದ ಕಾಂಗ್ರೆಸ್‌ನ ಪ್ರಣಾಳಿಕೆಯೊಂದಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ʼನ್ಯಾಯಪತ್ರʼ ಎಂದು ಕರೆಯಲಾಗಿದೆ. ಆದರೆ, ʼವಿಕಾಸ್‌ʼ ಎಂಬ ಪದವು ಮೋದಿಯವರೊಂದಿಗೆ ತಳುಕು ಹಾಕಿಕೊಂಡಿದೆ. ಮೋದಿಯವರು ತಮ್ಮ ಭಾಷಣಗಳಲ್ಲಿ ಪದೇ ಪದೆ ಉಲ್ಲೇಖಿಸುವ ಸಂಗತಿಯೆಂದರೆ ʼಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್.ʼ ಹೀಗೆ ಎರಡೂ ಪದಗಳನ್ನು ಏಕಕಾಲಕ್ಕೆ ಬಳಸಿ, ಎರಡೂ ಒಕ್ಕೂಟಗಳ ಜೊತೆಗೆ ಹೋಗಲು ತಾನು ಸಿದ್ಧ ಎಂಬ ಸಂದೇಶವನ್ನು ಕೂಡ ನಿತೀಶ್‌ ರವಾನಿಸಿದ್ದಾರೆ ಎಂದು ತರ್ಕಿಸಲಾಗಿದೆ.

ಈ ಎರಡು ಸಂದೇಶಗಳ ಮೂಲಕ, ಪ್ರಧಾನಿ ಪದವಿಯನ್ನು ತನಗೆ ನೀಡಿದರೆ ತಾನು ಇಂಡಿಯಾ ಜೊತೆಗೂ ಹೋಗಲು ಸಿದ್ಧ ಎಂಬುದನ್ನು ನಿತೀಶ್‌ ಸಾರಿದ್ದಾರೆ ಎಂದು ಸಂದೇಹಿಸಲಾಗುತ್ತಿದೆ.

Muliya

ಜಾಹೀರಾತು

SendShare22Share
Previous Post

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಯೋಗ ತರಗತಿ ಉದ್ಘಾಟನೆ

Next Post

ಸರ್ಕಾರ ರಚಿಸಲು ಎನ್‌ಡಿಎ ತಯಾರಿ; ಇಂದು ಬೆಳಿಗ್ಗೆ 11:30ಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಸರ್ಕಾರ ರಚಿಸಲು ಎನ್‌ಡಿಎ ತಯಾರಿ; ಇಂದು ಬೆಳಿಗ್ಗೆ 11:30ಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

ಸರ್ಕಾರ ರಚಿಸಲು ಎನ್‌ಡಿಎ ತಯಾರಿ; ಇಂದು ಬೆಳಿಗ್ಗೆ 11:30ಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..