• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ? ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ ತಾಣ – ಉತ್ತರ ಸಿಗದ ಪ್ರಶ್ನೆ

ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ? ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ ತಾಣ – ಉತ್ತರ ಸಿಗದ ಪ್ರಶ್ನೆ

June 28, 2024
ಮೆಸ್ಕಾಂ ಖಾಸಗೀಕರಣ ವಿಚಾರ : ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

ಮೆಸ್ಕಾಂ ಖಾಸಗೀಕರಣ ವಿಚಾರ : ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

June 24, 2026
ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

June 24, 2026
ಬಾಲಿವುಡ್‍ನ  ಬಾದ್ ಶಾ, ಕಿಂಗ್ ಖಾನ್  ಶಾರುಖ್ ಖಾನ್  ಜೂನ್ 25ರಂದು ಮಂಗಳೂರಿಗೆ

ಬಾಲಿವುಡ್‍ನ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ

June 24, 2026
ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್  – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್ – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

June 24, 2026
ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

June 24, 2026
ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

June 23, 2026
ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

June 23, 2026
ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

June 23, 2026
ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

June 23, 2026
ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

June 23, 2026
ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ  ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

June 20, 2026
ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

June 20, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, June 24, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮೆಸ್ಕಾಂ ಖಾಸಗೀಕರಣ ವಿಚಾರ : ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ಮೆಸ್ಕಾಂ ಖಾಸಗೀಕರಣ ವಿಚಾರ : ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಜಿಲ್ಲೆ

ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ? ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ ತಾಣ – ಉತ್ತರ ಸಿಗದ ಪ್ರಶ್ನೆ

by ಪ್ರಜಾಧ್ವನಿ ನ್ಯೂಸ್
June 28, 2024
in ಜಿಲ್ಲೆ, ದಕ್ಷಿಣ ಕನ್ನಡ, ಪುತ್ತೂರು, ಮಂಗಳೂರು
0
ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ? ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ ತಾಣ – ಉತ್ತರ ಸಿಗದ ಪ್ರಶ್ನೆ
8
SHARES
22
VIEWS
ShareShareShare

ಪುತ್ತೂರು: ಪುತ್ತೂರಿಗೆ ಸಂಬಂಧಪಟ್ಟಂತೆ ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ(ಪ್ರವಾಸಿ) ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ತುದಿಯಲ್ಲಿ ನಿಂತರೆ ಪುತ್ತೂರಿನ ಅಷ್ಟದಿಕ್ಕನ್ನೂ ಇಲ್ಲಿಂದ ವೀಕ್ಷಿಸಬಹುದು. ಆದರೆ ಹಸಿರು ಹೊದ್ದು ಮಲಗಿದ್ದ ಬಿರುಮಲೆ ಈಗ ಮೊದಲಿನಂತಿಲ್ಲ. ತನ್ನ ನೈಸರ್ಗಿಕ ಚೆಲುವನ್ನು ಕಳೆದುಕೊಂಡು ಬಿರುಮಲೆ ಈಗ ಅರೆ ಬೆತ್ತಲೆಯಾಗಿದೆ. ಹಸಿರ ಸೆರಗು ಜಾರಿದ್ದು ನೈಸರ್ಗಿಕ ಸೊಬಗೂ ಮೊದಲಿನಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶವಾದ ಬಿರುಮಲೆ ಇಲ್ಲಿ ಬೀಳುವ ಬಿರುಮಳೆಗೆ ಕುಸಿಯಲಿದೆಯೇ? ಎಂಬ ಚಿಂತೆ, ಭಯ ಎಲ್ಲರನ್ನೂ ಕಾಡತೊಡಗಿದೆ.

ashwinistudioputtur

ಜಾಹೀರಾತು

ಕಸ್ತೂರಿ ರಂಗನ್‌ ವರದಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 17 ಗ್ರಾಮ, ಸುಳ್ಯ ತಾಲೂಕಿನ 18 ಗ್ರಾಮ, ಪುತ್ತೂರು ತಾಲೂಕಿನ 11 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಹೆಚ್ಚು ಜನ ವಾಸವಿರುವ ಪರಿಸರದ ದೃಷ್ಟಿಯಿಂದ ಮಹತ್ವವಿಲ್ಲದ ಊರು, ಪಟ್ಟಣ, ನಗರಗಳನ್ನು ಕಲ್ಚರಲ್‌ ಲ್ಯಾಂಡ್‌ ಸ್ಕೇಪ್‌ ಎಂದು ಕರೆಯಲಾಗುತ್ತದೆ. ಅಂತೆಯೇ ಬಿರುಮಲೆ ಬೆಟ್ಟದಂತಹ ಪ್ರದೇಶವನ್ನು ನ್ಯಾಚುರಲ್‌ ಲ್ಯಾಂಡ್‌ ಸ್ಕೇಪ್‌ ಎಂದು ಕರೆಯಲಾಗುತ್ತದೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶ ಯಾ ಬೆಟ್ಟದಲ್ಲಿ ಕಟ್ಟಡ ಕಟ್ಟುವುದಕ್ಕೆ, ಟೌನ್‌ ಶಿಪ್‌ ನಿರ್ಮಾಣಕ್ಕೆ, ಮಾರ್ಗಗಳ ನಿರ್ಮಾಣಕ್ಕೆ ನಿರ್ಬಂಧವಿದೆ, ನಿಯಂತ್ರಕ ಕ್ರಮಗಳಿವೆ.

Muliya

ಜಾಹೀರಾತು

ಆದರೆ ಪ್ರಕೃತಿ ಜತೆ ಮನುಷ್ಯನ ಚೆಲ್ಲಾಟ ಇಂದು ನಿನ್ನೆಯದ್ದಲ್ಲ. ಬಿರುಮಲೆಯ ಬಾಹುಗಳನ್ನು ಕಡಿದು ನೆಲಸಮಗೊಳಿಸಿ ಬೆಟ್ಟದ ಸುತ್ತಲು ಈಗ ಹಲವು ಜನ ವಸತಿಯನ್ನು ನಿರ್ಮಿಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಬೆಟ್ಟದ ಮೇಲೆ ಬಿದ್ದ ಮಳೆನೀರು ನೇರವಾಗಿ ಕೆಳಗೆ ಹರಿದು ಹೋಗುತ್ತಿತ್ತು. ಆದರೆ ಈಗ ಕಡಿದು ನೆಲಸಮಗೊಳಿಸಿದ ಭೂಮಿಯಲ್ಲಿ ಬಿದ್ದ ಮಳೆ ನೀರು ಅಲ್ಲಿಯೇ ಭೂಮಿಯ ಒಡಲು ಸೇರುತ್ತಿದೆ. ಇದರಿಂದ ಹೆಚ್ಚಾಗುವ ನೀರನ ಒರತೆ ಬೆಟ್ಟದ ಸಮತೋಲನವನ್ನು ಹಾಳುಗೆಡವಿದೆ. ಒಂದೆರಡು ವರ್ಷಗಳ ಹಿಂದೆ ಪಕ್ಕದ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದಂತೆ ಇಲ್ಲಿಯೂ ಬೆಟ್ಟ ಕುಸಿತದ ಭಯ ತಪ್ಪಿದ್ದಲ್ಲ. ಇದರಿಂದಾಗುವ ಅನಾಹುತ ಊಹಿಸಲಸಾಧ್ಯ.

ಪ್ರಕೃತಿಯ ರುದ್ರ ತಾಂಡವದ ಮುಂದೆ ನಾವು ಕೈಕಟ್ಟಿ ನಿಲ್ಲಬೇಕಾದ ಪ್ರಮೇಯ ಬಂದರೂ ಬರಬಹುದು. ಬೆಟ್ಟ ಕಡಿದು ಮನೆ ನಿರ್ಮಿಸಿದವನಿಗೆ, ರಸ್ತೆ ನಿರ್ಮಿಸಿದವನಿಗೆ ಆಧುನಿಕ ಭಗೀರಥನೆಂದು ಬಿರುದು ಕೊಡುವ ನಾವೇ ಇದಕ್ಕೆಲ್ಲಾ ಹೊಣೆ, ಕಾರಣ ಎಂಬ ಅರಿವು ನಮಗಿದ್ದರೂ ಒಪ್ಪಿಕೊಳ್ಳಲು ಮಾತ್ರ ತಯಾರಿಲ್ಲ. ಕಾರಣ ಪ್ರಕೃತಿಯನ್ನು ನಾವು ನಮ್ಮ ಲಾಭಕ್ಕಾಗಿ ಅಂದೂ… ಇಂದೂ ನಮಗೆ ಬೇಕಾದಂತೆ ಬಳಸಿಕೊಂಡು ಬಂದಿದ್ದೇವೆ. ಆದರೆ ಪ್ರಕೃತಿ ಪೂರ್ತಿಯಾಗಿ ಎಂದೂ ನಮ್ಮ ವಶವಾಗಿಲ್ಲ. ಯಾವ ಕ್ಷಣ ಅದು ತನ್ನ ವಿಶಾಲ ಶಕ್ತಿಯನ್ನು ಪ್ರದರ್ಶಿಸುತ್ತದೋ ಬಲ್ಲವರಿಲ್ಲ.

ಭೂಮಿ ಪ್ರಕೃತಿ. ವಿನಾಶದ ಘಟನೆಗಳು ಸಂಭವಿಸಿದಾಗ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ನೂರಾರು ಪ್ರಶ್ನೆಗಳನ್ನು ಜನ ಹಾಕಿಕೊಳ್ಳುತ್ತಾರೆ. ಭೂಗರ್ಭ ಶಾಸ್ತ್ರಜ್ಞರು, ವಿಜ್ಞಾನಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದರೆ ಪ್ರತೀ ಸಮಾಜ ಪ್ರಚಲಿತವಿರುವ ಅಂಧ ವಿಶ್ವಾಸಗಳ ಅನುಸಾರ ಪ್ರತಿಕ್ರಿಯಿಸುತ್ತದೆ. ಆದರೆ ಸುರಿಯುವ ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ ಎನ್ನುವ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರ ಸಿಕ್ಕಿಲ್ಲ.

SendShare3Share
Previous Post

ಅಕ್ರಮಸಕ್ರಮ ಕಡತ ವಿಲೇವಾರಿಗೆ ನೂತನ ಆಪ್; ಲೋಪದೋಷ ಸರಿಪಡಿಸುವಂತೆ ಶಾಸಕರ ಮನವಿ

Next Post

ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ

ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..